ಬೆಂಗಳೂರು ಗಲಭೆ ಪ್ರಕರಣ: ಮತ್ತೊಬ್ಬ ಪ್ರಮುಖ ಆರೋಪಿ ಬಂಧನ…

ಬೆಂಗಳೂರು, ಆಗಸ್ಟ್, 20, 2020(www.justkannada.in):  ಡಿ.ಜೆ.ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನ ಬಂಧಿಸಲಾಗಿದೆ.jk-logo-justkannada-logo

ಖಲೀದ್ ಬಂಧಿತ ಆರೋಪಿ   ಡಿ.ಜೆ ಹಳ್ಳಿ ರೋಷನ್ ನಗರದ ನಿವಾಸಿಯಾದ ಖಲೀದ್ ಗಲಭೆಗೆ ಪ್ರಚೋದನೆ ನೀಡಿ ತಲೆಮರೆಸಿಕೊಂಡಿದ್ದ. ಈತನು ಮುಜಮ್ಮಿಲ್, ಆಯಾಜ್, ಆಫ್ನಾನ್ ಜೊತೆಗೂಡಿ ಎಸ್ ಡಿಪಿಐ ಕಾರ್ಯಕರ್ತರನ್ನು ಒಗ್ಗೂಡಿಸಿ ಗಲಭೆಗೆ ಮುಂದಾಗಿದ್ದ ಎಂಬ ಮಾಹಿತಿಯ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.bangalore-riot-case-another-accused-arrest

ಸದ್ಯ ಆರೋಪಿ ಖಲೀದ್ ನನ್ನ ಡಿ.ಜೆ ಹಳ್ಳಿ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Bangalore- riot case-Another – accused -arrest