ಬನಶಂಕರಿ ವಿಶೇಷ ಜಾತ್ರಾ ಮಹೋತ್ಸವ: ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಡಿಸಿಎಂ ಅಶ್ವಥ್ ನಾರಾಯಣ್…

kannada t-shirts

ಬೆಂಗಳೂರು,ಜನವರಿ,28,2021(www.justkannada.in):  ನಗರದ ಮಲ್ಲೇಶ್ವರ ಹತ್ತನೇ ಕ್ರಾಸ್‌ನಲ್ಲಿರುವ ಶ್ರೀ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ಗುರುವಾರ ವಿಶೇಷ ಜಾತ್ರಾ ಮಹೋತ್ಸವ ಹಾಗೂ ಪೂಜಾ ಕೈಂಕರ್ಯಗಳು ನೆರೆವೇರಿದವು. ಈ ಸಂದರ್ಭದಲ್ಲಿ ದೇಗುಲಕ್ಕೆ ಭೇಟಿ ನೀಡಿದ ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥ ನಾರಾಯಣ, ಬನಶಂಕರಿ ಅಮ್ಮನವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.bangalore-banashankari-special-jatra-mahotsav-dcm-ashwath-narayan

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್; ರಾಜ್ಯವನ್ನು ತೀವ್ರವಾಗಿ ಕಾಡಿದ ಕೋವಿಡ್‌ ಮಹಾಮಾರಿಯಿಂದ ಈಗಷ್ಟೇ ಹೊರಬೀಳುತ್ತಿದ್ದೇವೆ. ಇನ್ನೇನು ಕೆಲ ದಿನಗಳಲ್ಲಿಯೇ ಎಲ್ಲರಿಗೂ ಲಸಿಕೆಯೂ ಸಿಗಲಿದೆ. ಶ್ರೀ ಬನಶಂಕರಿ ಅಮ್ಮನವರ ಕೃಪೆಯಿಂದ ಈ ಎಲ್ಲ ಸಂಕಷ್ಟಗಳು ದೂರವಾಗಿ ರಾಜ್ಯದಲ್ಲಿ ಸುಖ ಶಾಂತಿ ನೆಲೆಸಲಿ ಎಂದು ಪ್ರಾರ್ಥನೆ ಮಾಡಿದ್ದಾಗಿ ಹೇಳಿದರು.bangalore-banashankari-special-jatra-mahotsav-dcm-ashwath-narayan

ಜಾತ್ರೆಯ ವಿಶೇಷ ಹಿನ್ನೆಲೆಯಲ್ಲಿ ಅಮ್ಮನವರನ್ನು ಅರ್ಷಕರು ವಿಶೇಷವಾಗಿ ಅಲಂಕಾರ ಮಾಡಿದ್ದರು. ದೇವಾಲಯ ತಳಿರು-ತೋರಣಗಳಿಂದ ಕಂಗೊಳಿಸುತ್ತಿತ್ತು. ಕೋವಿಡ್‌ ಮಾರ್ಗಸೂಚಿಯನ್ನು ಪಾಲಿಸುತ್ತಲೇ ಭಕ್ತರು ಅಮ್ಮನವರ ದರ್ಶನ ಪಡೆದು ಪುನೀತರಾದರು.

Key words: Bangalore-Banashankari- Special Jatra Mahotsav- DCM -Ashwath Narayan …

website developers in mysore