ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ ಮೂವರ ಬಂಧನ: ಹಿಂಸಾಚಾರ ಕೈಬಿಡುವಂತೆ ಸಚಿವ ಈಶ್ವರಪ್ಪ ಮನವಿ.

ಶಿವಮೊಗ್ಗ,ಫೆಬ್ರವರಿ,21,2022(www.justkannada.in): ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣದಲ್ಲಿ ಮೂವರನ್ನ ಬಂಧಿಸಲಾಗಿದ್ದು ಉಳಿದ ಆರೋಪಿಗಳನ್ನ ಶೀಘ್ರವೇ ಬಂಧಿಸುತ್ತೇವೆ ಎಂದು ಸಚಿವ ಕೆ,ಎಸ್ ಈಶ್ವರಪ್ಪ ತಿಳಿಸಿದರು.

ಇಂದು ಮೃತ ಹರ್ಷನ ನಿವಾಸಕ್ಕೆ ಭೇಟಿ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ ಹರ್ಷನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇನ್ನು ಮನೆಯಿಂದ ವಿದ್ಯಾನಗರಿ ರೋಟರಿ ಚಿತಗಾರದವರೆಗೆ ಮೃತದೇಹದ ಪಾರ್ಥೀವ ಶರೀರದ ಅಂತಿಮ ಮೆರವಣಿಗೆ ನಡೆಯುತ್ತಿದ್ದು ಸಚಿವ ಕೆ.ಎಸ್ ಈಶ್ವರಪ್ಪ ಸಂಸದ ಬಿವೈ ರಾಘವೇಂದ್ರ ಸೇರಿ ನೂರಾರು ಮಂದಿ ಭಾಗಿಯಾಗಿದ್ದಾರೆ.

ಹರ್ಷನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಕಲ್ಲು ತೂರಾಟ ಹಿಂಸಾಚಾರ ಕೈ ಬಿಡಿ  ಒಬ್ಬರೂ ಕೂಡ ಒಂದು ಕಲ್ಲನ್ನ ಮುಟ್ಟಬಾರದು ಶಾಂತಿಯುತವಾಗಿ ಹರ್ಷ ಅಂತ್ಯಸಂಸ್ಕಾರ ನಡೆಯಬೇಕು.

ಪ್ರಧಾನಿ ಮೋದಿ, ಬಿಎಸ್ ವೈ ಸಿಎಂ ಮಾತು ಕೇಳೋಣ. ನಿಮಗಿಂತ ನಮಗೂ ರೋಷ ಹೆಚ್ಚಿದೆ. ಏನ್ ಕೌಂಟರ್ ಮಾಡಿ ಅಂದರೇ ತಕ್ಷಣ ಮಾಡಲು ಆಗಲ್ಲ. ಪ್ರಕರಣ ಸಂಬಂಧ ಮೂವರನ್ನ ಬಂಧಿಸಲಾಗಿದ್ದು, ಉಳಿದವರನ್ನ ಶೀಘ್ರವೇ ಬಂಧಿಸುತ್ತೇವೆ. ಎಂದರು.

Key words: Bajrang Dal-murder –case- Minister -Ishwarappa