ಮೈಸೂರಿನಲ್ಲಿ ಹಿಂದುಳಿದ ವರ್ಗಗಳ ಮೊರ್ಚಾ ಸಭೆ: ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀ ವತ್ಸ ಸೇರಿ ಹಲವರು ಭಾಗಿ….

ಮೈಸೂರು,ಅಕ್ಟೋಬರ್,22,2020(www.justkannada.in): ನಗರದ ಭಾರತೀಯ ಜನತಾ ಪಾರ್ಟಿಯ  ಕಚೇರಿಯಲ್ಲಿ ಇಂದು ಹಿಂದುಳಿದ ವರ್ಗಗಳ 188 ಸಣ್ಣ ಸಣ್ಣ ಜಾತಿಯ ಪ್ರತಿನಿಧಿಗಳಾಗಿ ಇಂದು ಸಭೆ ಸೇರಿ  ಕಾರ್ಯಕಾರಿಣಿ ನಡೆಸಿದರು.Backward Classes -Morcha –meeting-Mysore –BJP-office

ಸಭೆಯಲ್ಲಿ ಪಂಡಿತ್ ದೀನ ದಯಾಳ್ ಹಾಗೂ ಶ್ಯಾಂ ಪ್ರಸಾದ್ ಮುಖರ್ಜಿ ಹಾಗೂ ಭಾರತ ಮಾತೆ ಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆ ಯನ್ನು ಪ್ರಾರಂಭಿಸಲಾಯಿತು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಗರ ಅಧ್ಯಕ್ಷರಾದ ಟಿ.ಎಸ್.ಶ್ರೀ ವತ್ಸ ಅವರು ಇಂದು ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಯ ನೇತೃತ್ವದ ಸರ್ಕಾರವಿದ್ದು ಸರ್ಕಾರದ ಸವಲತ್ತುಗಳನ್ನು ಜನ ಸಾಮನ್ಯರ ಮನೆ ಬಾಗಿಲಿಗೆ ತೆಗೆದು ಕೊಂಡು ಹೊಗುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ಕಿವಿ ಮಾತು ಹೇಳಿದರು..

ನಂತರ ನಗರ ಓ.ಬಿ.ಸಿ.ಅಧ್ಯಕ್ಷ ಜೋಗಿಮಂಜು ಮಾತನಾಡಿ, ಮೈಸೂರು ನಗರದ ನಾಲ್ಕು ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರು ಹೆಚ್ಚಿನ ರೀತಿಯಲ್ಲಿ ಸಂಘಟಿತರಾಗಬೇಕು. ಹಿಂದುಳಿವ ವರ್ಗದವರಿಗೆ ಕುಲ ಕಸುಬು ಮೂಲವಿದ್ದು ಅತಿ ಹೆಚ್ಚು ಜನ ಅಸಂಘಟಿತ ವಲಯದಲ್ಲಿ ಇರುತ್ತಾರೆ ಇಂತಹ ವ್ಯಕ್ತಿಗಳನ್ನು ಗುರುತಿಸಿ ಸರ್ಕಾರದ ಸವಲತ್ತುಗಳನ್ನು ಕೊಡಿಸಬೇಕು ಎಂದು ತಿಳಿಸಿದರು.Backward Classes -Morcha –meeting-Mysore –BJP-office

ಈ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಶ್ರೀ ವತ್ಸ , ನಗರ ಓ.ಬಿ.ಸಿ.ಅಧ್ಯಕ್ಷರಾದ ಜೋಗಿಮಂಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ವಿವೇಕಾನಂದ ಡಬ್ಬಿ, ಸುರೇಶ್ ಬಾಬಣ್ಣ,ಕಾರ್ಯದರ್ಶಿ ಕೊಟ್ರೇಶ್, ಜಯದೇವ್, ಉಸ್ತುವಾರಿ ಹರ್ಷ, ಪ್ರಧಾನಕಾರ್ಯದರ್ಶಿ ಸೋಮಸುಂದರ್, ವಾಣೀಶ್, ಗೋಪಾಲ್, ಮಣಿರತ್ನಂ ರವರು ಇದ್ದರು.

Key words: Backward Classes -Morcha –meeting-Mysore –BJP-office