ಹೋರಾಟಗಾರರಿಗೆ ಜಯ ಶತಸಿದ್ಧ ಎಂಬುದು ಸಾಬೀತು-ಬಾಬ್ರಿ ಮಸೀದಿ ತೀರ್ಪು ಕುರಿತು ಸಿಎಂ ಬಿಎಸ್ ವೈ ಸಂತಸ…

ಬೆಂಗಳೂರು, ಸೆಪ್ಟಂಬರ್,30,2020(www.justkannada.in):  ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿ ಸೇರಿ ಎಲ್ಲಾ 32 ಆರೋಪಿಗಳನ್ನು ಖುಲಾಸೆಗೊಳಿಸಿ  ಲಖನೌ ಸಿಬಿಐ ಕೋರ್ಟ್ ನೀಡಿದ ತೀರ್ಪನ್ನು ಸಿಎಂ ಬಿಎಸ್ ಯಡಿಯೂರಪ್ಪ ಸ್ವಾಗತಿಸಿದ್ದಾರೆ.jk-logo-justkannada-logo

ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ, ಹೋರಾಟಗಾರರಿಗೆ ಜಯ ಶತಸಿದ್ಧ ಎಂಬುದು ಸಾಬೀತಾಗಿದೆ. ಹೋರಾಟಗಾರರಗೆ ಎಂದಿಗೂ ಹಿನ್ನಡೆಯಾಗುವುದಿಲ್ಲ. ಇದು ಭಾರತವೇ ಒಪ್ಪುವಂತಹ ತೀರ್ಪಾಗಿದೆ ಎಂದು ಹೇಳಿದ್ದಾರೆ.babri-masjid-verdict-cm-bs-yeddyurappa-welcome

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕಾರ್ಯ ಆರಂಭವಾಗಿದೆ. ಅಂದು ಎಲ್.ಕೆ ಅಡ್ವಾಣಿ ಅವರು ನಡೆಸಿದ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಈ ಯಶಸ್ಸಿಗೆ ಕಾರಣರಾದ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಹಾಗೂ ಉಮಾ ಭಾರತಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ನುಡಿದಿದ್ದಾರೆ.

Key words: Babri Masjid –verdict- CM BS yeddyurappa-welcome