‘ಹಸಿರು ಬೆಳೆಸಿ ಬರ ನೀಗಿಸಿ’: ಹಸಿರು ಕರ್ನಾಟಕ ಆಂದೋಲನ ಕಾರ್ಯಕ್ರಮದಲ್ಲಿ ಅರಣ್ಯ ಉಳಿವಿನ ಬಗ್ಗೆ ಜಾಗೃತಿ ಜಾಥಾ..

ಚಾಮರಾಜನಗರ,ಜೂ,8,2019(www.justkannada.in): ಹಸಿರು ಕರ್ನಾಟಕ ಆಂದೋಲನ  ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ಅರಣ್ಯ ಇಲಾಖೆ ಸಿದ್ದಪಡಿಸಿದ್ದ ‘ಹಸಿರು ಬೆಳೆಸಿ ಬರ ನೀಗಿಸಿ’ ಸ್ಥಬ್ದ ಚಿತ್ರ ಮೆರವಣಿಗೆಗೆ ಶಾಸಕ ಎನ್ ಮಹೇಶ್ ಚಾಲನೆ ನೀಡಿದರು. ಅರಣ್ಯ ಸಿಬ್ಬಂದಿ ಹಾಗೂ ಕೆಲ ಸ್ವಯಂ ಸೇವಾ ಸಂಘಗಳು ನಗರದ ಬೀದಿಗಳಲ್ಲಿ ಅರಣ್ಯ ಉಳಿವಿನ ಬಗ್ಗೆ ಜಾಗೃತಿ ಜಾಥಾ ನಡೆಸಿದರು.

ಪ್ರಧಾನ‌ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್ ) ಪುನಟಿ ಶ್ರೀಧರ್, ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗ ಶೆಟ್ಟಿ.. ಶಾಸಕ ಎನ್ ಮಹೇಶ್ , ಡಿಸಿಎಫ್ ಏಡುಕುಂಡಲು ಭಾಗಿಯಾಗಿದ್ದರು.

Key words: Awareness on forest survival in the Green Karnataka campaign

#Chamarajanagar #Awareness #forest #survival