ನಾಳಿನ(ಶನಿವಾರ) ಭವಿಷ್ಯ ಇಂದೇ: ಅಂಜನೇಯನ ಕೃಪೆಯಿಂದ ಶುಭ ಫಲ ನಿಮ್ಮ ರಾಶಿಗೆ ಇದೆಯಾ ಈ ಕೂಡಲೇ ವೀಕ್ಷಿಸಿ…

ಬೆಂಗಳೂರು,ಮಾ,6,2020(www.justkannada.in): ಆಂಜನೇಯನ ಕೃಪೆಯಿಂದ ಈ ಕೆಳಗಿನ ರಾಶಿಗಳಿಗೆ ಶುಭ ಫಲ ನಿಮ್ಮ ರಾಶಿ ಇದೆಯಾ ಈ ಕೂಡಲೇ ವೀಕ್ಷಿಸಿ..

ಮೇಷ-ಇಂದು ನಿಮಗೆ ಅನುಕೂಲಕರ ದಿನ. ಆರೋಗ್ಯ ಉತ್ತಮವಾಗಿರುತ್ತದೆ. ಅತ್ಯಂತ ಉತ್ಸಾಹದಿಂದಿರುತ್ತೀರಿ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ. ಕುಟುಂಬಸ್ಥರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ.

ವೃಷಭ-ಇಂದು ಅತ್ಯಂತ ಸಮಾಧಾನದಿಂದಿರಿ. ಮನಸ್ಸು ಚಿಂತ್ರಾಗಸ್ಥವಾಗುವ ಸಾಧ್ಯತೆ ಇದೆ. ಆರೋಗ್ಯ ಹದಗೆಡಬಹುದು. ಕಣ್ಣು ನೋವು ಕಾಣಿಸಿಕೊಳ್ಳಬಹುದು. ಶೀಘ್ರವೇ ಸಮಸ್ಯೆಗಳೆಲ್ಲ ನಿವಾರಣೆಯಾಗಲಿದೆ.

ಮಿಥುನ-ಇವತ್ತು ನಿಮಗೆ ಲಾಭದಾಯಕ ದಿನ. ಅವಿವಾಹಿತರಿಗೆ ಯೋಗ್ಯ ಸಂಗಾತಿ ದೊರಕಬಹುದು. ಧನ ಪ್ರಾಪ್ತಿಗೆ ಶುಭ ದಿನ. ಮಿತ್ರರಿಂದ ಲಾಭವಾಗಬಹದು.

ಕಟಕ – ನಿಮಗೆ ಆರಾಮದಾಯಕ ದಿನ. ಎಲ್ಲಾ ಕಾರ್ಯಗಳು ಸರಳವಾಗಿ ಪೂರ್ಣಗೊಳ್ಳಲಿವೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಪ್ರಸನ್ನರಾಗಿರುತ್ತಾರೆ.

ಸಿಂಹ – ಇಂದು ನಿಮಗೆ ಮಿಶ್ರಫಲವಿದೆ. ನಿಗದಿತ ಕೆಲಸಗಳೆಡೆಗೆ ಗಮನಹರಿಸಿ. ಇಂದು ಹೆಚ್ಚು ಕೋಪಗೊಳ್ಳುತ್ತೀರಿ. ಇದರಿಂದ ಮನಸ್ಸು ಅಶಾಂತಿಯಿಂದ ತುಂಬಿರುತ್ತದೆ.

ಕನ್ಯಾ-ಇವತ್ತು ಯಾವುದೇ ಹೊಸ ಕಾರ್ಯ ಆರಂಭಿಸಬೇಡಿ. ಆರೋಗ್ಯದ ಬಗ್ಗೆ ಗಮನವಹಿಸಿ. ಹೊರಗಿನ ಊಟ ತಿಂಡಿ ಬೇಡ. ಕೋಪ ಹೆಚ್ಚಾಗಲಿದೆ. ಮಾತಿನಮೇಲೆ ನಿಯಂತ್ರಣವಿರಲಿ.

ತುಲಾ –

ಇವತ್ತಿನ ದಿನ ಮೋಜು ಮಸ್ತಿಯಲ್ಲಿ ಕಳೆಯಲಿದೆ. ಹೊಸ ವಸ್ತ್ರ ಖರೀದಿ ಮಾಡಲಿದ್ದೀರಿ. ದೇಹ ಮತ್ತು ಮನಸ್ಸಿನ ಆರೋಗ್ಯವೂ ಉತ್ತಮವಾಗಿರುತ್ತದೆ. ಮನೆಯಲ್ಲಿ ಶಾಂತಿ ನೆಮ್ಮದಿ  ನೆಲೆಸಲಿದೆ.

ವೃಶ್ಚಿಕ –

ಗೃಹಸ್ಥ ಜೀವನದಲ್ಲಿ ಶಾಂತಿ ಮತ್ತು ಆನಂದ ತುಂಬಿರುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಅನಾರೋಗ್ಯ ಪೀಡಿತರ ದೇಹಸ್ಥಿತಿ ಸುಧಾರಿಸಲಿದೆ. ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ.

ಧನು ರಾಶಿ- ಯಾತ್ರೆ ಅಥವಾ ಪ್ರವಾಸವನ್ನು ಮುಂದೂಡಿ. ಉದರ ಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಸಾಹಿತ್ಯ ಮತ್ತು ಕಲೆಯ ಬಗ್ಗೆ ಆಸಕ್ತಿ ಮೂಡಲಿದೆ.

ಮಕರ – ಇವತ್ತು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಕೊಂಚ ಚಿಂತಾಜನಕವಾಗಿರುತ್ತದೆ. ಮನೆಯಲ್ಲಿನ ಜಗಳದ ವಾತಾವರಣದಿಂದ ಮನಸ್ಸಿನಲ್ಲಿ ಖಿನ್ನತೆ ಆವರಿಸುತ್ತದೆ. ಅತ್ಯಂತ ಶಾಂತವಾಗಿರಲು ಪ್ರಯತ್ನಿಸಿ.

ಕುಂಭ – ಇಂದು ನಿಮ್ಮ ಮನಸ್ಸು ಅತ್ಯಂತ ಹಗುರವಾಗಲಿದೆ. ಮನಸ್ಸಿನಲ್ಲಿ ಮೂಡಿದ ಚಿಂತೆಯೆಲ್ಲ ಪರಿಹಾರವಾಗುತ್ತದೆ. ಉತ್ಸಾಹ ಕೂಡ ಹೆಚ್ಚುವ ಸಾಧ್ಯತೆ ಇದೆ.

ಮೀನ-ಖರ್ಚು ಮತ್ತು ಕೋಪ ಎರಡನ್ನೂ ನಿಯಂತ್ರಿಸಿಕೊಳ್ಳಿ. ಯಾರೊಂದಿಗೂ ಜಗಳವಾಡಬೇಡಿ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ. ಶಾಂತವಾಗಿದ್ದರೆ ಪರಿಸ್ಥಿತಿ ಸುಧಾರಿಸಲಿದೆ.

ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀ ಗುರು ಶ್ರೀನಿವಾಸ್ ಭಟ್  ಮೋ 9538855512 ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9538855512

.ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9538855512

Key words: astrology-bangalore-kannada-mysore-dina.bhavishya