ತೆಂಗಿನ ಕಾಯಿ ಕಳ್ಳತನ ಮಾಡುತ್ತಿದ್ದ 7 ಮಂದಿ ಅರೆಸ್ಟ್…

kannada t-shirts

ಮೈಸೂರು,ಸೆಪ್ಟಂಬರ್,17,2020(www.justkannada.in): ಹೊಲ ಗದ್ದೆಗಳಲ್ಲಿ ತೆಂಗಿನಕಾಯಿ ಕದಿಯುತ್ತಿದ್ದ 7 ಮಂದಿ ಕಳ್ಳರನ್ನು ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಸಾಲಿಗ್ರಾಮ ಠಾಣಾ ಪೊಲೀಸರು ಬಂಧಿಸಿದ್ದಾರೆ.jk-logo-justkannada-logo

ಕೆ.ಆರ್.ನಗರದ ಪ್ರದೀಪ್, ಸೋಮಶೇಖರ್, ರಾಜು, ಪ್ರಜ್ವಲ್, ಮಹಾದೇವ್, ಯೋಗೇಶ್, ಅಭಿ ಬಂಧಿತ ಆರೋಪಿಗಳು. ಬಂಧಿತರು ಕೆ.ಆರ್.ನಗರ ತಾಲ್ಲೂಕಿನ ಸುತ್ತಮುತ್ತ ಹೊಲ ಗದ್ದೆಗಳಲ್ಲಿ ತೆಂಗಿನಕಾಯಿ ಕದಿಯುತ್ತಿದ್ದರು. ಈ ನಡುವೆ ಸಾಲಿಗ್ರಾಮ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ 7ಮಂದಿಯನ್ನು  ಬಂಧಿಸಿದ್ದಾರೆ.arrest-7-accused-stealing-coconut-k-r-nagar-saligrama

ಬಂಧಿತರಿಂದ 60ಸಾವಿರ ನಗದು ಹಾಗೂ ಎರಡು ಗೂಡ್ಸ್ ಆಟೋವನ್ನ ವಶಕ್ಕೆ ಪಡೆದಿದ್ದು ಈ ಕುರಿತು ಸಾಲಿಗ್ರಾಮ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Arrest- 7 accused- stealing -coconut –k.r nagar- saligrama

website developers in mysore