ಮೈಸೂರಿನ ಪಂಚಗವಿ ಮಠಕ್ಕೆ ಆಡಳಿತಾಧಿಕಾರಿಗಳ ನೇಮಕ….

ಮೈಸೂರು,ಡಿಸೆಂಬರ್,8,2020(www.justkannada.in):  ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇರುವ ಪಂಚಗವಿ ಮಠಕ್ಕೆ ಆಡಳಿತಾಧಿಕಾರಿಗಳನ್ನ ನೇಮಕ ಮಾಡಿ ಮುಜರಾಯಿ ಇಲಾಖೆಯ ಅಧೀನ ಕಾರ್ಯದರ್ಶಿ ವರಲಕ್ಷ್ಮೀ ಅದೇಶ ಹೊರಡಿಸಿದ್ದಾರೆ.appointment-administrative-officers-panchagavi-math-mysore

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಪಂಚಗವಿ ಮಠದ ಅಸ್ತಿ ವಿಚಾರದಲ್ಲಿ ಅರೋಪದ ಕೇಳಿ ಬಂದ ಹಿನ್ನೆಲೆ, ಮಠದ ಆಸ್ತಿ ರಕ್ಷಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮೈಸೂರಿನ ಉಪ‌ವಿಭಾಗದ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮಠದ ಅಡಳಿತ ಅಧಿಕಾರಿಯಾಗಿ ನೇಮಕ ಮಾಡಿ  ಮುಜರಾಯಿ ಇಲಾಖೆಯ ಅಧೀನ ಕಾರ್ಯದರ್ಶಿ ವರಲಕ್ಷ್ಮೀ ಅದೇಶ ಹೊರಡಿಸಿದ್ದಾರೆ.appointment-administrative-officers-panchagavi-math-mysore

ಮಠಕ್ಕೆ ಸೇರಿದ ಕೃಷಿ ಜಮೀನು ಹಾಗೂ ಇತರೆ ಆಸ್ತಿಗಳ‌ ರಕ್ಷಣೆ ದೃಷ್ಠಿಯಿಂದ ಪಂಚಗವಿ ಮಠಕ್ಕೆ ಆಡಳಿತಾಧಿಕಾರಿಗಳನ್ನ ನೇಮಕ ಮಾಡಲಾಗಿದೆ.

Key words: Appointment – Administrative Officers – Panchagavi Math – Mysore.