ಕನ್ನಡ ಪುಸ್ತಕ ಪ್ರಾಧಿಕಾರದ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ-ಬಹುಮಾನಗಳು ಪ್ರಕಟ.

ಬೆಂಗಳೂರು,ಜೂನ್,4,2022(www.justkannada.in):  ಕನ್ನಡ ಪುಸ್ತಕ ಪ್ರಾಧಿಕಾರದ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಪ್ರಾಧಿಕಾರದ ಅಧ್ಯಕ್ಷ  ಡಾ. ಎಂ.ಎನ್. ನಂದೀಶ್ ಹಂಚೆ ಇಂದು ಪ್ರಕಟಿಸಿದರು.

ಇಂದು ನಡೆದ ಸ್ಥಾಯಿ ಸಮಿತಿ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಈ ಪ್ರಶಸ್ತಿಗಳ ಬಗ್ಗೆ ವಿಸ್ತೃತ ಚರ್ಚೆ ನಡೆದು ಸರ್ವಾನುಮತದಿಂದ ಪ್ರಶಸ್ತಿಗಳ ಆಯ್ಕೆ ಮಾಡಲಾಯಿತು. ವಿವರ ಕೆಳಕಂಡಂತಿದೆ.

2021ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿ ವಿಜೇತ ಪಟ್ಟಿ ಈ ಕೆಳಕಂಡಂತಿದೆ.

ಅತ್ಯುತ್ತಮ ಪ್ರಕಾಶನ ಪ್ರಶಸ್ತಿ –  ರೂ.1,00,000-00 –  ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು

ಡಾ. ಎಂ. ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ – ರೂ.75,000-00 – ಡಾ. ಗುರುಲಿಂಗ ಕಾಪಸೆ, ಧಾರವಾಡ

ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ –  ರೂ.50,000-00 – ಡಾ. ಮೋಹನ್ ಆಳ್ವ, ಮೂಡಬಿದರೆ

ಡಾ|| ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ – ರೂ.25,000-00 – ಡಾ. ನಾ. ಸೋಮೇಶ್ವರ, ಬೆಂಗಳೂರು.

2021ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನಗಳ ವಿವರ

ಪುಸ್ತಕ  ಸೊಗಸು ಮೊದಲನೇ ಬಹುಮಾನ  – ರೂ.25,000-00

ನಮ್ಮ ದೇಹದ ವಿಜ್ಞಾನ

ಸಂ: ಡಾ. ಟಿ.ಆರ್. ಅನಂತರಾಮು

ಡಾ. ನಾ. ಸೋಮೇಶ್ವರ

ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್  ಲಿಮಿಟೆಡ್, ಬೆಂಗಳೂರು

ಪುಸ್ತಕ  ಸೊಗಸು ಎರಡನೇ ಬಹುಮಾನ  – ರೂ.20,000-00

ಅಜ್ಜಿ ಮನೆ ಸವಿ

ಸಂ: ಉದ್ಯಾವರ ವಿಜಯಲಕ್ಷ್ಮಿ ಶೆಣೈ

ವಿಶೇಷ ಪಬ್ಲಿಕೇಷನ್ಸ್, ಬೆಂಗಳೂರು

ಪುಸ್ತಕ  ಸೊಗಸು ಮೂರನೇ ಬಹುಮಾನ –  ರೂ.10,000-00

ಮಹಾತ್ಮರ ಚರಿತಾಮೃತ

ಲೇ: ಪ್ರಭುಚನ್ನಬಸವ ಸ್ವಾಮೀಜಿ

ಶ್ರೀ ಗುರುಚನ್ನಬಸವೇಶ್ವರ ಗ್ರಂಥಮಾಲೆ, ಅಥಣಿ

ಮಕ್ಕಳ ಪುಸ್ತಕ  ಸೊಗಸು ಬಹುಮಾನ – ರೂ.8,000-00

ನೋಟ್ಬುಕ್  – ಮಕ್ಕಳ ಕಥೆಗಳು

ಲೇ: ಡಾ. ಕೆ. ಶಿವಲಿಂಗಪ್ಪ ಹಂದಿಹಾಳು

ಕವನ ಪ್ರಕಾಶನ, ಬಳ್ಳಾರಿ

ಮುಖಪುಟ  ಚಿತ್ರ ವಿನ್ಯಾಸ ಬಹುಮಾನ – ರೂ.10,000-00

ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ

ಲೇ: ಡಾ. ಮುಜಾಫರ್ ಅಸ್ಸಾದಿ

ಬಹುಮಾನಿತ ಕಲಾವಿದರು:

ಜಿ. ಅರುಣ ಕುಮಾರ್

ಮುಖಪುಟ ಚಿತ್ರ ಕಲೆಯ ಬಹುಮಾನ – ರೂ.8,000-00

ರೂಬಿಕ್ಸ್ ಕ್ಯೂಬ್ ಮತ್ತಿತರ ನಾಟಕಗಳು ಕ್ಲೀನ್ ಅಂಡ್ ಕ್ಲಿಯರ್ ಪಾಯಖಾನೆ ಮತ್ತು ಆಯಾಮ

ಲೇ: ಬೇಲೂರು ರಘುನಂದನ್

ಬಹುಮಾನಿತ ಕಲಾವಿದರು :

ಮಂಜುನಾಥ ವಿ.ಎಂ.

ಪುಸ್ತಕ  ಮುದ್ರಣ ಸೊಗಸು ಬಹುಮಾನ – ರೂ.5,000-00

ಸಿರಿ ಬೆಳಕು

ಲೇ: ಶಿ.ರಾ. ಹೂಗಾರ

ಮುದ್ರಣಾಲಯ :

ತ್ವರಿತ ಮುದ್ರಣ ಆಫ್ಸೆಟ್ ಪ್ರಿಂಟರ್ಸ್, ಗದಗ

Key words: Annual Award 2021- Kannada Book Authority –Prizes- published.