ಕ್ರಿಕೆಟ್: ‘ಸೂಪರ್​ ಓವರ್​ ಟೈ ಬೌಂಡರಿ ಲೆಕ್ಕಾಚಾರ’ ಚರ್ಚೆಗೆ ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ ನೇಮಕ

kannada t-shirts

ಬೆಂಗಳೂರು, ಜುಲೈ 30, 2019 (www.justkannada.in): ಅನಿಲ್​ ಕುಂಬ್ಳೆ ನೇತೃತ್ವದಲ್ಲಿ ಫೈನಲ್​ ಪಂದ್ಯದ ಸೂಪರ್​ ಓವರ್​ ಟೈ ಆದರೆ ವಿನ್ನರ್​ ಘೋಷಣೆಗೆ ಮೊರೆ ಹೋಗುತ್ತಿರುವ ಬೌಂಡರಿ ಲೆಕ್ಕಾಚಾರ ನಿಯಮದ ಬಗ್ಗೆ ಚರ್ಚಿಸಲು ಕಮಿಟಿ ರಚಿಸಿದ್ದು, ಅದರ ನೇತೃತ್ವವನ್ನು ಕನ್ನಡಿಗ ಅನಿಲ್​ ಕುಂಬ್ಳೆವಹಿಸಿಕೊಳ್ಳಲಿದ್ದಾರೆ.

ಇತ್ತೀಚೆಗೆ ಮುಗಿದ ಐಸಿಸಿ ವಿಶ್ವಕಪ್​ ಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ಹಾಗೂ ಇಂಗ್ಲೆಂಡ್​ ನಡುವಿನ​ ಪಂದ್ಯ ಟೈ ಆಗಿತ್ತು. ನಂತರ ನಡೆದ ಸೂಪರ್​ ಓವರ್​ ಕೂಡ ಟೈ ಆಗಿದ್ದರಿಂದ ಮೊದಲೇ ನಿರ್ಧರಿತವಾಗಿದ್ದ ಹೆಚ್ಚು ಬೌಂಡರಿಗಳಿಸಿದ ಇಂಗ್ಲೆಂಡ್​ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

ಈ ನಿಯಮವನ್ನು ವಿಶ್ವದಾದ್ಯಂತ ಹಲವು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದರು. ಹೀಗಾಗಿ ಈ ವಿಚಾರವನ್ನು ಐಸಿಸಿ ಕ್ರಿಕೆಟ್​ ಕಮಿಟಿ ಗಂಭೀರವಾಗಿ ತೆಗೆದುಕೊಂಡಿದ್ದು, 2020ರ ಮೊದಲ ಚತುರ್ಮಾಸದಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ಈ ನಿಯಮದ ಬಗ್ಗೆ ಚರ್ಚೆ ನಡೆಸುವುದಾಗಿ ಹಾಗೂ ಈ ಚರ್ಚೆಯ ನೇತೃತ್ವವನ್ನು ಅನಿಲ್​ ಕುಂಬ್ಳೆವಹಿಸಿಕೊಳ್ಳುತ್ತಿದ್ದಾರೆ ಎಂದು ಐಸಿಸಿ ಜನರಲ್​ ಮ್ಯಾನೇಜರ್​ ಜಿಯೊಫ್​ ಜೆಫ್ ಅಲ್ಲಾರ್ಡೈಸ್ ತಿಳಿಸಿದ್ದಾರೆ.

website developers in mysore