ಹುರಳಿ ಸೊಪ್ಪು ತಂದ ಆತಂಕ: ರಸ್ತೆ ಮಧ್ಯೆ ಅರ್ಧ ಗಂಟೆ ನಿಂತ ಆಂಬುಲೆನ್ಸ್.

ಮೈಸೂರು,ಜನವರಿ,19,2022(www.justkannada.in): ಹುರಳಿ ಸೊಪ್ಪು ಟೈರಿಗೆ ಸುತ್ತಿಕೊಂಡು ಗರ್ಭಿಣಿ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ರಸ್ತೆ ಮಧ್ಯೆ ಅರ್ಧ ಗಂಟೆ ನಿಂತ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ನಂಜನಗೂಡು  ತಾಲೂಕಿನ ಕೂಡ್ಲಾಪುರ ಬಳಿ ಈ ಘಟನೆ ನಡೆದಿದೆ. ನಂಜನಗೂಡು ತಾಲೂಕು ತರದಲೆ ಗ್ರಾಮದ ಗರ್ಭಿಣಿಯನ್ನ ಆಂಬ್ಯಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ಮಧ್ಯೆ ಕೂಡ್ಲಾಪುರ ಬಳಿ ರೈತರು ರಸ್ತೆಯಲ್ಲಿ ಹುರಳಿ ಒಕ್ಕಣೆ ಮಾಡುತ್ತಿದ್ದರು.father-son-injured-accident-mysore-ambulance-bed-neglect-treatment

ಈ ವೇಳೆ ಹುರಳಿ ಸೊಪ್ಪು ಆ್ಯಂಬುಲೆನ್ಸ್ ಟೈರಿಗೆ ಸುತ್ತಿಕೊಂಡು, ವಾಹನ ಮುಂದಕ್ಕೆ ಹೋಗಲಾರದೆ ಡ್ರೈವರ್ ಪರದಾಡಿದ್ದಾರೆ. ಈ ಸಮಯಲದಲ್ಲಿ  ಸ್ಥಳೀಯರ ನೆರವಿನೊಂದುಗೆ ಹುರಳಿ ಸೊಪ್ಪು ತೆರವುಗೊಳಿಸಲಾಯಿತು. ಅರ್ಧ ಗಂಟೆ ಕಾರ್ಯಾಚರಣೆ ನಂತರ ಆಂಬುಲೆನ್ಸ್ ಮುಂದೆ ಸಾಗಿದ ಘಟನೆ ನಡೆಯಿತು.

Key words: ambulance – half an hour – middle – road-mysore