ಸರ್ಕಾರದ ವಿರುದ್ಧದ ಆರೋಪಕ್ಕೆ ಪುರಾವೆ ಸಿಕ್ಕಿದೆ; ಸಿಎಂ ರಾಜೀನಾಮೆ ನೀಡಲಿ- ರಾಮಲಿಂಗರೆಡ್ಡಿ ಆಗ್ರಹ.

ಬೆಂಗಳೂರು,ಮಾರ್ಚ್,4,2023(www.justkannada.in): ಸರ್ಕಾರದ ನಾವು ಮಾಡಿದ ಭ್ರಷ್ಟಾಚಾರದ ಆರೋಪಕ್ಕೆ ಈಗ ಸಾಕ್ಷಿ ಸಿಕ್ಕಿದೆ. ಸಿಎಂ ಬಸವರಾಜ ಬೊಮ್ಮಾಯಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಆಗ್ರಹಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ರಾಮಲಿಂಗರೆಡ್ಡಿ,  ಚುನಾವಣಾ ಗಿಮಿಕ್ ಗಾಗಿ ರಾಜ್ಯಕ್ಕೆ ಬಿಜೆಪಿ ನಾಯಕರು ಬರುತ್ತಿದ್ದಾರೆ. ಇವರ ಭ್ರಷ್ಟಾಚಾರ ಬಗ್ಗೆ ಮಾತಾಡಿ ವರಿಷ್ಟರು ಕ್ರಮ ತೆಗೆದುಕೊಳ್ಳಲಿ. ಭ್ರಷ್ಟಾಚಾರದ ಆರೋಪಕ್ಕೆ ದಾಖಲೆ ಸಿಕ್ಕಿದ್ದು ಕೂಡಲೇ ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಬಿಜೆಪಿಯ ಎಲ್ಲಾ ಶಾಸಕರು ಸಚಿವರ ಮನೆಗಳಲ್ಲಿ ಶೋಧ ಮಾಡಿ- ಕೃಷ್ಣಭೈರೇಗೌಡ

ಮಾಜಿ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಎಲ್ಲಾ ಇಲಾಖೆಗಳಲ್ಲೂ ಲಂಚ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದರ ವಿರುದ್ದ ಕಾಂಗ್ರೆಸ್ ನಿರಂತರವಾಗಿ ಹೋರಾಟ ಮಾಡುತ್ತಿದೆ.  ಬಿಜೆಪಿಯ ಎಲ್ಲಾ ಶಾಸಕರು ಸಚಿವರ ಮನೆಗಳಲ್ಲಿ ಶೋಧ ಮಾಡಿ.  ಕೋಟ್ಯಾಂತರ ಹಣ ಖರ್ಚು ಮಾಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದರು.

Key words:  allegation-against – government – evidence- CM –resign- congress-Ramalingareddy