ಕೊರೊನಾ ಸೋಂಕು ಹೆಚ್ಚಳ: ಮತ್ತೆ ಒಂದು ವಾರ ಬೆಂಗಳೂರು ಲಾಕ್’ಡೌನ್?

kannada t-shirts

ಬೆಂಗಳೂರು, ಜುಲೈ 11, 2020 (www.justkannada.in): ಕೊರೊನಾ ಸೋಂಕಿನ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುಳಿವು ನೀಡಿದ್ದಾರೆ.

ಬೆಂಗಳೂರಿನಲ್ಲಿ ಕೋವಿಡ್ 19 ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಒಂದು ವಾರ ಕಾಲ ಮತ್ತೆ ಕಠಿಣ ಲಾಕ್ ಡೌನ್ ಮಾಡಲು ಬಿಎಸ್ವೈ ಸಚಿವ ಸಂಪುಟದ ಸಚಿವರು ಸಿಎಂಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಈ ಬಾರಿ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ನೀಡಿ ಬಳಿಕ ಲಾಕ್ ಡೌನ್ ಮಾಡಲು ಸಿಎಂ ನಿರ್ಧರಿಸಿದ್ದಾರೆ. ಜತೆಗೆ ಲಾಕ್ ಡೌನ್ ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಅಲ್ಲದೇ ಬಡಾವಣೆವಾರು ಲಾಕ್ ಡೌನ್ ಮಾಡುವ ಕುರಿತು ಸಿಎಂ ಚಿಂತಿಸಿದ್ದು, ಇದಕ್ಕೆ ಸಚಿವರು ಒಂದಷ್ಟು ಸಲಹೆ ನೀಡಿದ್ದಾರೆ. ತಜ್ಞರು ನೀಡಿರುವ ವರದಿ ಆಧರಿಸಿ ವಲಯವಾರು ಲಾಕ್ ಡೌನ್ ಮಾಡಲು ಚಿಂತನೆ ನಡೆದಿದೆ.

website developers in mysore