ದರ್ಶನ್ ಕಾಲ್! ಮೈಸೂರು ಝೂನಲ್ಲಿ ಆಫ್ರಿಕನ್ ಆನೆ ದತ್ತು ಪಡೆದ ಉಪ್ಪಿ

ಬೆಂಗಳೂರು, ಜೂನ್ 11, 2021 (www.justkannada.in): ನಟ ದರ್ಶನ್ ಕರೆ ನೀಡಿದ್ದ ಪ್ರಾಣಿ ದತ್ತು ಅಭಿಯಾನಕ್ಕೆ ಕೈಜೋಡಿಸಿ ನಟ ಉಪೇಂದ್ರ ಆಫ್ರಿಕನ್ ಆನೆ ದತ್ತು ಪಡೆದಿದ್ದಾರೆ.

ಮೈಸೂರಿನ ಜಯಚಾಮರಾಜೇಂದ್ರ ಮೃಘಾಲಯದಿಂದ ಆಫ್ರಿಕನ್ ಆನೆಯೊಂದನ್ನು ದತ್ತು ಪಡೆದು ದರ್ಶನ್ ಮನವಿಗೆ ಸ್ಪಂದಿಸಿದ್ದಾರೆ ಉಪ್ಪಿ.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿರುವ ಉಪೇಂದ್ರ, ದರ್ಶನ್ ಕರೆಯಂತೆ ಆಫ್ರಿಕನ್ ಆನೆ ಒಂದನ್ನು ದತ್ತು ಪಡೆದು ಈ ಮೂಲಕ ದರ್ಶನ್ ರವರ ಮಹತ್ಕಾರ್ಯಕ್ಕೆ ಕೈಜೋಡಿಸಿದ್ದೇವೆ ಎಂದಿದ್ದಾರೆ.

ಉಪೇಂದ್ರ ಅವರ ಕಾರ್ಯವನ್ನು ಪ್ರಶಂಸಿರುವ ನಟ ದರ್ಶನ್, ‘ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಆಫ್ರಿಕನ್ ಆನೆ ದತ್ತು ಪಡೆದ ಶ್ರೀ ಉಪೇಂದ್ರ ಅವರಿಗೆ ಹೃದಯಪೂರ್ವಕ ಧನ್ಯವಾದಗಳು’ ಎಂದಿದ್ದಾರೆ.