ಏಪ್ರಿಲ್ 15ರಂದು ಬೆಳಗ್ಗೆ 11.10ಕ್ಕೆ ಅಚ್ಚರಿಯೊಂದು ಕಾದಿದೆ! ಕುತೂಹಲ ಮೂಡಿಸಿದ ಕಿಚ್ಚನ ಟ್ವೀಟ್

ಬೆಂಗಳೂರು, ಏಪ್ರಿಲ್ 12, 2021 (www.justkannada.in): ಕಿಚ್ಚ ಸುದೀಪ್ ಏಪ್ರಿಲ್ 15ರಂದು ಬೆಳಗ್ಗೆ 11.10ಕ್ಕೆ ಅಚ್ಚರಿಯೊಂದು ಕಾದಿದೆ ಎಂದು ಟ್ಟೀಟ್ ಮಾಡಿದ್ದಾರೆ.

ಅಂದಹಾಗೆ ಏಪ್ರಿಲ್ 15ರಂದು ವಿಕ್ರಾಂತ್ ರೋಣ ಚಿತ್ರದ ಕುರಿತು ಹೊಸ ಸುದ್ದಿ ಹೊರ ಹೊರಬಹುದು ಎನ್ನುವ ಕುತೂಹಲ ಕಿಚ್ಚನ ಅಭಿಮಾನಿಗಳಲ್ಲಿ ಮೂಡಿದೆ.

ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ಕೊರೊನಾ 2ನೇ ಅಲೆ ಹೆಚ್ಚಳದ ಹಿನ್ನೆಲೆಯಲ್ಲಿ ಚಿತ್ರತಂಡದ ಮುಂದಿನ ನಿರ್ಧಾರದ ಮೇಲೂ ಎಲ್ಲ ಚಿತ್ತ ನೆಟ್ಟಿದೆ.

ಈ ನಡುವೆ ಸುದೀಪ್ ಈ ಟ್ವೀಟ್ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.