ವಿಷ್ಣು ದಾದಾ ಬರ್ತ್ ಡೇಗೆ ಕಿಚ್ಚನ ಭಾವುಕ ಟ್ವೀಟ್ !

ಬೆಂಗಳೂರು, ಸೆಪ್ಟೆಂಬರ್ 18, 2019 (www.justkannada.in): ನಟ ಕಿಚ್ಚ ಸುದೀಪ್ ವಿಷ್ಣುವರ್ಧನ್ ಜನ್ಮ ದಿನದಂದು ಭಾವುಕ ಟ್ವೀಟ್ ಮಾಡಿದ್ದಾರೆ.

ಸುದೀಪ್ ಅವರ ಟ್ವಿಟರ್ ಅಕೌಂಟ್ ನ ಡಿಪಿಯಲ್ಲಿ ವಿಷ್ಣುದಾದಾನ ಫೋಟೋ ಹಾಕಿಕೊಂಡಿದ್ದಾರೆ. ಸಾಹಸ ಸಿಂಹನ ಹಲವು ಫೋಟೋಗಳಿರುವ ಡಿಪಿಯನ್ನು ಕಿಚ್ಚ ಸೇರಿದಂತೆ ವಿಷ್ಣುವರ್ಧನ್ ಅಭಿಮಾನಿಗಳು ಸಹ ಹಾಕಿಕೊಂಡಿದ್ದಾರೆ.

ಕಿಚ್ಚನ ಬರಹ ಅವರ ಅಭಿಮಾನವನ್ನು ಎತ್ತಿ ಹಿಡಿಯುತ್ತಿವೆ  ಹೀಗೆ ಬರೆದುಕೊಂಡಿದ್ದಾರೆ ಸುದೀಪ್…..

“ಹುಟ್ಟು ಹಬ್ಬದ ಶುಭಾಶಯ ಅಪ್ಪಾಜಿ. ನಿಮ್ಮ ಮೇಲೆ ಪ್ರೀತಿ ಎಷ್ಟುಇದ್ಯೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕೋಪವು ಅಷ್ಟೇ ಇದೆ. ಅನಾಥರಾಗಿದ್ದೀವಿ. ಬಹಳ ಬೇಗೆ ಹೋಗಿಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ, ಆದರೆ ನಿಮ್ಮ ಅಗತ್ಯ ನಮಗಿತ್ತು. ನಿಮ್ಮನ್ನು ನೆನೆಯುವ, ಪ್ರೀತಿಸುವ, ಅಭಿಮಾನಿಯಲೊಬ್ಬ ಕಿಚ್ಚ” ಎಂದು ಬರೆದುಕೊಂಡಿದ್ದಾರೆ.