ಆರಕ್ಷಕರಿಗೆ ಅನ್ನದಾನ ಮಾಡುತ್ತಿದೆ ಕಿಚ್ಚ ಸುದೀಪ್ ತಂಡ

ಬೆಂಗಳೂರು, ಮೇ 13, 2021 (www.justkannada.in):

ನಟ ಕಿಚ್ಚ ಸುದೀಪ್ ತಂಡ ಪೊಲೀಸರಿಗೆ ಊಟ ಒದಗಿಸುವ ಕಾರ್ಯ ಮಾಡುತ್ತಿದೆ.

ಹೌದು. ಸಂಕಷ್ಟದ ಕಾಲದಲ್ಲಿ ಕಾನೂನು ಪಾಲನೆ ಮಾಡಲು ಕರ್ತವ್ಯ ನಿಭಾಯಿಸುತ್ತಿರುವ ಆರಕ್ಷಕರಿಗೆ ಅನ್ನದಾನ ಮಾಡುತ್ತಿದೆ ಕಿಚ್ಚ ಸುದೀಪ್ ತಂಡ.

ರಾಜರಾಜೇಶ್ವರಿ ನಗರ, ಕೆಆರ್ ಮಾರ್ಕೆಟ್, ಮೈಸೂರ್ ರಸ್ತೆ, ಅತ್ತಿಗುಪ್ಪೆ ಸೇರಿದಂತೆ ಹಲವೆಡೆ ಸುದೀಪ್ ಅಭಿಮಾನಿಗಳು ಆಹಾರ ವಿತರಿಸಿದ್ದಾರೆ.

ಅಂದಹಾಗೆ ಮೊನ್ನೆಯಷ್ಟೇ ಸುದೀಪ್ 300 ಆಕ್ಸಿಜನ್ ಸಿಲಿಂಡರ್ ಒದಗಿಸಿದ್ದರು.