ಪ್ರವಾಹ ಸಂತ್ರಸ್ತರ ನೆರವಿಗೆ ನಿಂತ ನಟ ಪ್ರಕಾಶ್ ರೈ

kannada t-shirts

ಚೆನ್ನೈ, ನವೆಂಬರ್ 26, 2020 (www.justkannada.in): ನಿವಾರ್ ಚಂಡಮಾರುತದಿಂದ ಸಂಭವಿಸಿರುವ ಪ್ರವಾಹ ಸಂತ್ರಸ್ತರ ನೆರವಿಗೆ ನಟ ಪ್ರಕಾಶ್ ರೈ ಧಾವಿಸಿದ್ದಾರೆ.

ತಮಿಳುನಾಡಿನಲ್ಲಿ ನಿವಾರ್ ಚಂಡಮಾರುತದಿಂದ ಭಾರೀ ಮಳೆಯಾಗಿದ್ದು, ಹಲವೆಡೆ ಜನರು ಮನೆ ಮಠ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಇಂತಹವರ ನೆರವಿಗೆ ನಟ ಪ್ರಕಾಶ್ ರೈ ನೆರವು ನೆರವು ನೀಡಿದ್ದಾರೆ.

ಪ್ರಕಾಶ್ ರೈ ಫೌಂಡೇಷನ್ ಮೂಲಕ ಸೂರು ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ ವಸತಿ, ಊಟದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಪ್ರಕಾಶ್ ರೈ ‘ಈ ಸಂತ್ರಸ್ತರಿಗೆ ನನ್ನ ಕೈಲಾದ ನೆರವು ನೀಡಿದ್ದೇನೆ ಎಂದು ನೆಮ್ಮದಿಯಿದೆ’ ಎಂದು ಬರೆದುಕೊಂಡಿದ್ದಾರೆ.

website developers in mysore