ಪೈರಸಿ ಮಾಫಿಯಾ ಗುಟ್ಟು ಬಿಚ್ಚಿಟ್ಟ ನಟ ಜಗ್ಗೇಶ್

ಬೆಂಗಳೂರು, ಸೆಪ್ಟೆಂಬರ್ 24, 2019 (www.justkannada.in): ನವರಸನಾಯಕ ಜಗ್ಗೇಶ್ ಪೈರಸಿ ಬಗೆಗಿನ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಯಾರ ಚಿತ್ರ ಗೆಲ್ಲಬೇಕು, ಸೋಲಬೇಕು ಎಂದು ನಿರ್ಧರಿಸುವವರು ಜನರಲ್ಲ, ಪೈರಸಿ ಮಾಡುವವರು ಎಂದು ಜಗ್ಗೇಶ್ ಹೇಳಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಒಬ್ಬ ನಿರ್ದಿಷ್ಟ ಸ್ಟಾರ್ ನನ್ನು ಗುರಿಯಾಗಿಟ್ಟುಕೊಂಡು ಆತನ ಸಿನಿಮಾ ಹಾಳು ಮಾಡಿ ಸ್ಟಾರ್ ಗಿರಿ ತಪ್ಪಿಸಲು ಬೇಕಾದ ಎಲ್ಲಾ ಪ್ರಯತ್ನವೂ ನಡೆಯುತ್ತದೆ ಎಂದು ತಿಳಿಸಿದ್ದಾರೆ.

ಉದ್ದೇಶಪೂರ್ವಕವಾಗಿಯೇ ಒಂದು ಚಿತ್ರ ಹಿಟ್ ಆಗದಂತೆ, ಒಬ್ಬನ ಸ್ಟಾರ್ ಗಿರಿ ಪಟ್ಟ ತಪ್ಪಿಸಲು ಹಫ್ತಾ ಕೊಡಲಾಗುತ್ತದೆ. ಇದೆಲ್ಲವೂ ಬ್ಯುಸಿನೆಸ್ ರೀತಿ ನಡೆಯುತ್ತಿದೆ.