ಮಗ, ಸಹೋದರನಿಗಾಗಿ ಮತ್ತೆ ನಿರ್ದೇಶನಕ್ಕಿಳಿದ ನವರಸ ನಾಯಕ

ಬೆಂಗಳೂರು, ಡಿಸೆಂಬರ್ 05, 2019 (www.justkannada.in): 2 ವರ್ಷಗಳ ಬಳಿಕ ಜಗ್ಗೇಶ್ ಇದೀಗ ಮತ್ತೆ ಡೈರೆಕ್ಷನ್ ಕ್ಯಾಪ್ ತೊಡಲು ರೆಡಿಯಾಗಿದ್ದಾರೆ.

ಈಗಾಗಲೇ ಅವರು ‘ಗುರು’ ಮತ್ತು ‘ಮೇಲುಕೋಟೆ ಮಂಜ’ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು. ಈ ಬಾರಿ ಭಯಾನಕ ಮತ್ತು ಹಾಸ್ಯ ಪ್ರಧಾನ ಕಥೆಯೊಂದನ್ನು ಸಿನಿಮಾ ಮಾಡಲಿದ್ದಾರೆ.

ಅಂದ ಹಾಗೆ ಈ ಚಿತ್ರಕ್ಕೆ ಕೋಮಲ್ ಮತ್ತು ಅವರ ಪುತ್ರ ಗುರುರಾಜ್ ನಾಯಕರಾಗಿ ನಟಿಸಲಿದ್ದಾರೆ. ಫೆಬ್ರವರಿಯಲ್ಲಿ ಚಿತ್ರದ ಶೂಟಿಂಗ್ ನಡೆಯಲಿದ್ದು, ಸದ್ಯದಲ್ಲಿಯೇ ಚಿತ್ರದ ಹೆಸರು ಮತ್ತು ಟೀಸರ್ ಬಗ್ಗೆ ಮಾಹಿತಿ ನೀಡಲಿದ್ದಾರೆ.