ನಟ ದರ್ಶನ್ ಕಾರ್ಯಕ್ಕೆ ಸಾಥ್: ಪ್ರಾಣಿಯೊಂದನ್ನ ದತ್ತು ಪಡೆದ ನಟಿ ಅಮೂಲ್ಯ.

ಮೈಸೂರು,ಜೂನ್,16,2021(www.justkannada.in):  ಪ್ರಾಣಿಗಳ ದತ್ತು ಪಡೆಯುವ ಕಾರ್ಯಕ್ಕೆ ಸಾಥ್ ನೀಡಿರುವ ನಟಿ ಅಮೂಲ್ಯ, ಇದೀಗ ಮೈಸೂರಿನ ಮೃಗಾಲಯದಲ್ಲಿ ಪ್ರಾಣಿಯೊಂದನ್ನ ದತ್ತು ಪಡೆದಿದ್ದಾರೆ.jk

ಮೈಸೂರು ಮೃಗಾಲಯದಲ್ಲಿ ಜಾಗ್ವಾರ್ ಪ್ರಾಣಿಯನ್ನ ದತ್ತು ಪಡೆದಿರುವ ಬಗ್ಗೆ ನಟಿ ಅಮೂಲ್ಯ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.  ಈ ಮೂಲಕ ನಟ ದರ್ಶನ್ ಕಾರ್ಯಕ್ಕೆ ಸಾಥ್ ನೀಡಿದ್ದಾರೆ. ಜಾಗ್ವಾರ್ ನ್ನು ದತ್ತು ಪಡೆದ  ಬಳಿಕ ನಟಿ ಅಮೂಲ್ಯ ನಟ ದರ್ಶನ್ ಗೆ ಧನ್ಯವಾದ ಅರ್ಪಿಸಿದ್ದಾರೆ.

ಪ್ರಾಣಿಗಳ ದತ್ತು ಪಡೆಯುವ ಅಭಿಯಾನಕ್ಕೆ ನಟ ದರ್ಶನ್ ಮುನ್ನುಡಿ ಬರೆದಿದ್ದರು. ಇದೀಗ ನಟ ದರ್ಶನ್  ಹಾದಿ ತುಳಿದಿದ್ದಾರೆ ನಟಿ ಅಮೂಲ್ಯ. ಪ್ರಾಣಿಗಳ ರಕ್ಷಣೆಗೆ ನಮ್ಮದೊಂದು ಅಳಿಲು ಸೇವೆ ಎಂದು ನಟಿ ಅಮೂಲ್ಯ ಟ್ವೀಟ್ ಮಾಡಿದ್ದಾರೆ.

Key words: actor –Darshan-actress-amulya- adopted- Jaguar-mysore-zoo