ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಆರೋಪಿ ಉಪನೊಂದಾಣಾಧಿಕಾರಿಗೆ 4 ವರ್ಷ ಜೈಲುಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್.

kannada t-shirts

ಮೈಸೂರು,ಮಾರ್ಚ್,28,2023(www.justkannada.in): ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ಆರೋಪಿ ಮೈಸೂರು ಪೂರ್ವ ಉಪನೊಂದಾಣಾಧಿಕಾರಿ ಎಂ.ಗಿರೀಶ್ ಗೆ 4 ವರ್ಷ ಜೈಲುಶಿಕ್ಷೆ ಮತ್ತು 2 ರೂ. ಲಕ್ಷ ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.

ಪ್ರಕರಣ ಸಂಬಂಧಿಸಿದಂತೆ ಗುರುಮಂಟೇಸ್ವಾಮಿ ಅವರು ನೀಡಿದ ದೂರಿನನ್ವಯ ಆಗಿನ ಪೊಲೀಸ್ ಅಧೀಕ್ಷಕ ಜಗದೀಶ್ ಪ್ರಸಾದ್ ಅವರು ಉಪನೊಂದಾಣಾಧಿಕಾರಿ, ಆರೋಪಿ ಎಂ.ಗಿರೀಶ್‌ ವಿರುದ್ಧ ಮೊ.ಸಂ. 04/2014 ರಲ್ಲಿ ಕಲಂ 13(1) (e), 13(2) ಪಿ.ಸಿ.ಕಾಯ್ದೆ 1988 ರೆ/ವಿ 201 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣದಲ್ಲಿ ಪೊಲೀಸ್ ನಿರೀಕ್ಷಕರುಗಳಾದ ನಟರಾಜು, ಗೋಪಾಲಕೃಷ್ಣ, ಪರಶುರಾಮ್‌ ಹಾಗೂ ಬಾಲಕೃಷ್ಣ  ಅವರು ತನಿಖೆ ನಡೆಸಿ, ಆರೋಪಿಯು ಗಳಿಸಿದ ಆಸ್ತಿಯ ಪ್ರಮಾಣವು ಶೇಕಡಾ 58.72 ರಷ್ಟು ಅಧಿಕವಾಗಿರುವುದು ತನಿಖೆಯಿಂದ ಕಂಡುಬಂದಿತ್ತು.  ಆರೋಪಿಯ ವಿರುದ್ಧ ಅಂತಿಮ ವರದಿ ಜೊತೆಗೆ 77 ಸಾಕ್ಷಿದಾರರ ಪಟ್ಟಿಯನ್ನು ಘನ ನ್ಯಾಯಾಲಯಕ್ಕೆ  ಸಲ್ಲಿಸಿದ್ದರು. ಅದರಲ್ಲಿ ಆರೋಪಿತರ ವಿರುದ್ಧ ಅಭಿಯೋಜನಾ ಮಂಜೂರಾತಿಯ ಆದೇಶವನ್ನು ಆಗಿನ ಮುದ್ರಾಂಕ ಆಯುಕ್ತರು ಮತ್ತು ನೋಂದಣಿ ಪರಿವೀಕ್ಷಕರಾದ ಮನೋಜ್‌ ಕುಮಾರ್ ಮೀನಾ ಅವರು ನೀಡಿದ್ದರು.

ಈ ಪ್ರಕರಣದಲ್ಲಿ ಅಭಿಯೋಜಕರು 13 ಜನರ ಸಾಕ್ಷ್ಯವನ್ನು ಪಡೆದಿದ್ದು, ಎಲ್ಲಾ ಸಾಕ್ಷಿದಾರರು ಲೋಕಾಯುಕ್ತದ ಪರವಾಗಿ ಸಾಕ್ಷಿ ನುಡಿದಿದ್ದಾರೆ, ಇದನ್ನು ಪರಿಗಣಿಸಿದ 3ನೇ ಸತ್ರ ನ್ಯಾಯಾಲಯ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಧೀಶರಾದ ಕೆ.ಭಾಗ್ಯ ರವರು, ಆರೋಪಿಯನ್ನು ದೋಷಿಯೆಂದು ಪರಿಗಣಿಸಿ ಕಲಂ 13(1) (e), 13(2) ಪಿ.ಸಿ.ಕಾಯ್ದೆ 1988 ಗೆ 4 ವರ್ಷ ಕಾರಾಗೃಹ ವಾಸ ಹಾಗೂ 2,00,000  ರೂಪಾಯಿ ಹಣವನ್ನು ದಂಡ ವಿಧಿಸಿದೆ. ದಂಡವನ್ನು ಕಟ್ಟಲು ತಪ್ಪಿದಲ್ಲಿ ಸಾದಾ ಶಿಕ್ಷೆ 1 ವರ್ಷ ಕಾರಾಗೃಹ ವಾಸ ಹಾಗೂ ಕಲಂ 201 ಐಪಿಸಿ ಗೆ 2 ವರ್ಷ, 6 ತಿಂಗಳ ಕಾರಾಗೃಹವಾಸ, ದಂಡ 50,000/- ರೂಪಾಯಿ, ತಪ್ಪಿದಲ್ಲಿ ಸಾದಾ ಶಿಕ್ಷೆ 6 ತಿಂಗಳ ಕಾರಾಗೃಹ ವಾಸ ಎಂಬುದಾಗಿ ಈಗಿನ 3ನೇ ಸತ್ರ ನ್ಯಾಯಾಲಯ ಮತ್ತು ಶಿಕ್ಷೆಯನ್ನು ಪ್ರಕಟಿಸಿದ್ದಾರೆ.

ಈ ಪ್ರಕರಣದಲ್ಲಿ ವಾದವನ್ನು ವಿಶೇಷ ಲೋಕಾಯುಕ್ತ ಅಭಿಯೋಜಕಿ ಕಲಿಯಂಡ ಮುತ್ತಮ್ಮ ಪೂಣಚ್ಚ  ಅವರು ವಾದವನ್ನು ಮಂಡಿಸಿದರು.

Key words: Accused- sub-registrar -sentenced – 4 years -imprisonment -Rs 2 lakh- fine -mysore

website developers in mysore