ಮೈಸೂರಿನಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಇಬ್ಬರು ಸಾವು.

ಮೈಸೂರು,ಜುಲೈ,11,2022(www.justkannada.in):  ಮೈಸೂರಿನಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ  ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ಹುಣಸೂರು ತಾಲ್ಲೂಕು ಬಿಳಿಕೆರೆ ಬಳಿ ಈ ಅಪಘಾತ  ಸಂಭವಿಸಿದೆ. ವಿನೋದ್ ಕುಮಾರ್ ಮತ್ತು ಕ್ಯಾಂಟಿನ್ ಮೋಹನ್ ಮೃತ ದುರ್ದೈವಿಗಳು.ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನ ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತಪಟ್ಟವರು ಬೈಲುಕುಪ್ಪೆ ಮೂಲದವರು ಎಂದು ತಿಳಿದು ಬಂದಿದೆ.tractor-collision-bike-bike-rider-dies-on-the-spot-mysore

ಮೈಸೂರಿನಿಂದ ಬೈಲು ಕುಪ್ಪೆಗೆ ಕಾರಿನಲ್ಲಿ ಕುಟುಂಬ  ತೆರಳುತ್ತಿತ್ತು. ಹುಣಸೂರು ಕಡೆಯಿಂದ ಮೈಸೂರು ಕಡೆಗೆ ಇನ್ನೋವಾ ಕಾರು ಹೋಗುತ್ತಿತ್ತು. ಈ ವೇಳೆ ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಈ ಕುರಿತು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: accident-between-two cars -Mysore.