ನಾಮನಿರ್ದೇಶಿತ ನಿಗಮ-ಮಂಡಳಿ, ಪ್ರಾಧಿಕಾರದ ‘ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ರದ್ದು.

ಬೆಂಗಳೂರು,ಜುಲೈ,12,2022(www.justkannada.in): ರಾಜ್ಯದ ವಿವಿಧ ನಿಗಮ-ಮಂಡಳಿಗೆ, ಪ್ರಾಧಿಕಾರಗಳಿಗೆ  ನಾಮನಿರ್ದೇಶನ ಮಾಡಿದ್ದ ಅಧ್ಯಕ್ಷ-ಉಪಾಧ್ಯಕ್ಷರ ನೇಮಕವನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬಿಎಸ್ ಯಡಿಯೂರಪ್ಪ ಅವರ ಅವಧಿಯಲ್ಲಿ ನಡೆದಿದ್ಧ ರಾಜ್ಯದ ವಿವಿಧ ನಿಗಮ-ಮಂಡಳಿಗೆ, ಪ್ರಾಧಿಕಾರಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಾತಿ ರದ್ದುಗೊಳಿಸಿದೆ. ಎಲ್ಲಾ 22 ನಿಗಮ ಮಂಡಳಿಗಳ ನೇಮಕಾತಿ ರದ್ದು ಪಡಿಸಲಾಗಿದ್ದು, ಆಯಾ ಇಲಾಖೆಗಳ ವ್ಯಾಪ್ತಿಗೆ ಒಳಪಟ್ಟಂತೆ ಪ್ರತ್ಯೇಕವಾಗಿ ಸರ್ಕಾರದ ಆದೇಶವನ್ನು ಹೊರಡಿಸುವಂತೆ ಸೂಚಿಸಲಾಗಿದೆ.covid-dead-body-cancels-license-order-state-government

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಲ್ ಆರ್ ಮಹದೇವಸ್ವಾಮಿ, ಕರ್ನಾಟಕ ಜೀವ ವೈವಿದ್ಯ ಮಂಡಳಿ ಅಧ್ಯಕ್ಷರಾಗಿದ್ದ ಆನಂತ ಹೆಗಡೆ ಆಶೀಸರ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ಧ ನಂದೀಶ್ ಹಂಚೆ ಸೇರಿ 52 ಮಂದಿಗೆ ಕೋಕ್ ನೀಡಲಾಗಿದೆ. ಕೋಕ್ ನೀಡಲಾದವರ ಪಟ್ಟಿ ಹೀಗಿದೆ.

Key words: Abolition – appointment -Chairman-Vice-Chairman -Nominated -Corporation-Board- Authority.