ನದಿಗೆ ಬಸ್ ಉರುಳಿ 6 ಐಟಿಬಿಪಿ ಯೋಧರು ಹುತಾತ್ಮ.

kannada t-shirts

ಜಮ್ಮುಕಾಶ್ಮೀರ, ಆಗಸ್ಟ್,16,2022(www.justkannada.in): ನದಿಗೆ ಬಸ್ ಉರುಳಿ 6 ಐಟಿಬಿಪಿ ಯೋಧರು ಹುತಾತ್ಮರಾಗಿರುವ ಘಟನೆ   ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಫ್ರಿಸ್ಲಾನ್‌ ನಲ್ಲಿ ನಡೆದಿದೆ.

ಇಬ್ಬರು ಪೊಲೀಸರು ಸೇರಿ 39 ಮಂದಿ ಐಟಿಬಿಪಿ  ಯೋಧರು ಪ್ರಯಾಣಿಸುತ್ತಿದ್ದ ಬಸ್ ಉರುಳಿದ ಬಿದ್ದು 6 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ. ಈ ಯೋಧರನ್ನು ಅಮರನಾಥ ಯಾತ್ರೆಯ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು.

ಯೋಧರು ಚಂದನ್ವಾರಿಯಿಂದ ಪಹಲ್ಗಾಮ್ ಕಡೆಗೆ ಹೋಗುತ್ತಿದ್ದರು. ಈ ವೇಳೆ ಸಿವಿಲ್ ಬಸ್ ಬ್ರೇಕ್ ಫೇಲ್ ಆದ ನಂತರ ರಸ್ತೆ ಬದಿಯ ನದಿಯ ತಳಕ್ಕೆ ಬಿದ್ದಿದೆ.  ಹೆಚ್ಚಿನ ಯೋಧರಿಗೆ ಗಾಯಗಳಾಗಿರುವ ಸಾಧ್ಯತೆ ಇದೆ . ಮಾಹಿತಿ ನಿರೀಕ್ಷಿಸಲಾಗಿದೆ ಎಂದು ಐಟಿಬಿಪಿ ಹೇಳಿದೆ.  ಪೊಲೀಸ್ ಮತ್ತು ಇತರ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ರಕ್ಷಣಾ ಕಾರ್ಯಾಚರಣೆ ಸಾಗಿದೆ.

Key words: 6 ITBP- soldiers- martyred – bus -fell – river

website developers in mysore