ಮಳೆಯಲ್ಲಿ ಮುಳುಗಿರುವ ಮನೆಗೆ ತಲಾ 5 ಲಕ್ಷ ಪರಿಹಾರ ನೀಡಿ- ಸರ್ಕಾರಕ್ಕೆ ರಣದೀಪ್ ಸಿಂಗ್ ಸುರ್ಜೇವಾಲ ಒತ್ತಾಯ.

ಬೆಂಗಳೂರು,ಸೆಪ್ಟಂಬರ್,9,2022(www.justkannada.in):  ಪ್ರವಾಹದಿಂದ ಬೆಂಗಳೂರು ನಲುಗುತ್ತಿದ್ದು, ಈ ಅವಾಂತರಕ್ಕೆ ಬಿಜೆಪಿಯೇ ಕಾರಣ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಭಾರಿ ಮಳೆಯಿಂದಾಗಿ ಬೆಂಗಳೂರು ಜನರು ತತ್ತರಿಸಿದ್ದಾರೆ. ಬಿಜೆಪಿ ಸರ್ಕಾರದ  ವೈಪಲ್ಯದಿಂದ ಈ ಅವಾಂತರ ಸೃಷ್ಠಿಯಾಗಿದೆ.  ಮಳೆ ನೀರು ಹೋಗಲು ಜಾಗವಿಲ್ಲ.

ಸರ್ಕಾರ ಒತ್ತುವರಿ ತೆರವು ಮಾಡಿಲ್ಲ. ಒತ್ತುವರಿ ತೆರವು ಮಾಡಲು ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ..? ಮಳೆಯಲ್ಲಿ ಮುಳುಗಿರುವ ಮನೆಗಳಿಗೆ ತಲಾ 5 ಲಕ್ಷ ಪರಿಹಾರ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ರಣದೀಪ್ ಸಿಂಗ್ ಸುರ್ಜೇವಾಲ ಒತ್ತಾಯಿಸಿದರು.

Key words: 5 lakh- compensation – house – rain-Randeep Singh Surjewala