ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ: ಶಿವಮೊಗ್ಗಕ್ಕೆ 50 ಕೋಟಿ ಘೋಷಿಸಿದ ಸಿಎಂ ಬಿಎಸ್ ಯಡಿಯೂರಪ್ಪ…

ಶಿವಮೊಗ್ಗ,ಆ,13,2019(www.justkannada.in):  ಮನೆಕಳೆದುಕೊಂಡಿರುವ ನೆರೆ ಸಂತ್ರಸ್ತರಿಗೆ 5 ಲಕ್ಷ ಪರಿಹಾರ ನೀಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ನೆರೆ ಪಿಡೀತ ಪ್ರದೇಶಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ನಡುವೆ ಇಂದು ರಾಜೀವ್ ಗಾಂಧಿ ಬಡಾವಣೆ, ತೀರ್ಥಹಳ್ಳಿ ತಾಲ್ಲೂಕಿನ ಹೆಗಲತ್ತಿ ಗ್ರಾಮ ಸೇರಿ ಹಲವು ಕಡೆಗೆ ಭೇಟಿ ನೀಡಿ  ಸಿಎಂ ಬಿಎಸ್ ಯಡಿಯೂರಪ್ಪ ಪರಿಸ್ಥಿತಿ ಅವಲೋಕಿಸಿದರು.

ನಂತರ ಪ್ರವಾಹದಲ್ಲಿ ಮನೆ ಸಂಪೂರ್ಣ ನಾಶವಾದವರಿಗೆ 5 ಲಕ್ಷ ಮನೆ ಹಾನಿಯಾದವರಿಗೆ ದುರಸ್ತಿಗಾಗಿ 1 ಲಕ್ಷ ಪರಿಹಾರ ಘೋಷಣೆ ಮಾಡಿದರು. ಈ ಮಧ್ಯೆ ಆಸ್ತಿ ಪಾಸ್ತಿ,  ರಸ್ತೆ, ಸೇತುವೆ  ದುರಸ್ತಿಗಾಗಿ ಶಿವಮೊಗ್ಗ ನಗರಕ್ಕೆ ಸಿಎಂ ಬಿಎಸ್ ವೈ 50 ಕೋಟಿ ಹಣ ಘೋಷಣೆ ಮಾಡಿದ್ದಾರೆ.

ಬಳಿಕ ಮಾತನಾಡಿದ ಸಿಎಂ ಬಿಎಸ್ ವೈ, ಪ್ರವಾಹದಲ್ಲಿ ಸಂಪೂರ್ಣವಾಗಿ ಮನೆಕಳೆದುಕೊಂಡವರಿಗೆ 5 ಲಕ್ಷ ಮನೆಹಾನಿಯಾದವರಿಗೆ 1 ಲಕ್ಷ ಪರಿಹಾರ  ಶೀಘ್ರದಲ್ಲೇ ಮಂಜೂರು ಮಾಡುತ್ತೇವೆ. ಅಗತ್ಯ ಸಾಮಾಗ್ರಿಗಾಗಿ ತಕ್ಷಣದಲ್ಲಿ ನೆರೆ ಸಂತ್ರಸ್ತರಿಗೆ 10 ಸಾವಿರ ರೂ ಪರಿಹಾರ ನೀಡಿದ್ದೇವೆ.  40 ಸಾವಿರ ಕುಟುಂಬಗಳ ಪುನರ್ವಸತಿ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

Key words: 5 lakh -compensation – CM BS Yeddyurappa- announced -Rs 50 crore -Shimoga