ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ 68 ನೇ ವರ್ಧಂತೋತ್ಸವ: ಯದುವೀರ್ ದಂಪತಿಯಿಂದ ಪುಷ್ಪಾರ್ಚನೆ

ಮೈಸುರು,ಫೆ,20,2021(www.justkannada.in): ಶ್ರೀ ನಾಲ್ವಡಿ ಫೌಂಡೇಶನ್ ಇಂದ ಇಂದು ನಗರದ ಅರಮನೆಯಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ೬೮ ನೇ ವರ್ಧಂತೋತ್ಸವದ ಪ್ರಯುಕ್ತ ಶ್ರೀ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮತ್ತು ತ್ರಿಶಿಕಾ ಕುಮಾರಿ ದಂಪತಿಗಳು ಆದ್ಯವೀರ ನರಸಿಂಹರಾಜ ಒಡೆಯರ್‌ ಸಮೇತ ಬಂದು ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭದಲ್ಲಿ ಅರವನೆ ಮಂಡಳಿ ಅರಮನೆ ಉಪ ನಿರ್ದೇಶಕರಾದ ಸುಬ್ರಹ್ಮಣ್ಯ ಅರಮನೆಯ ಭದ್ರತಾ ಎ.ಸಿ.ಪಿ ಚಂದ್ರಶೇಖರ್ ಹಾಗು ಮಹಾರಾಜರ ಅಭಿಮಾನಿಗಳಾದ ನಂದೀಶ್ ಅರಸ್ , ಅರವಿಂದ್ ಶರ್ಮ ಶಾಂತರಾಜೇ ಅರಸ್ , ಎನ್.ಎಸ್ ದಾಸರಾಜೇ ಅರಸ್ , ಟಿ‌.ಕೆ ಸುಬ್ರಹ್ಮಣ್ಯ ರಾಜೇ ಅರಸ್ , ಚಂದ್ರ ಕಾಂತ ರಾಜೇ ಅರಸ್ , ಅಶ್ವತ್ಥ್ ನಾರಾಯಣ ರಾಜೇ ಅರಸ್ , ಸುರೇಶ್ ಉಪಸ್ಥಿತರಿದ್ದರು.

Key words: 68th anniversary – Narasimharaja Wodeyar