ರಾಜ್ಯ ಬಜೆಟ್ ಬಗ್ಗೆಯೂ ನಿರೀಕ್ಷೆ ಇಲ್ಲ: ಅದು ಬಿಜೆಪಿ ಬಚಾವ್ ಬಜೆಟ್ ಆಗಿರುತ್ತೆ- ಪ್ರಿಯಾಂಕ್ ಖರ್ಗೆ ವ್ಯಂಗ್ಯ.

ಕಲ್ಬುರ್ಗಿ,ಫೆಬ್ರವರಿ,2,2023(www.justkannada.in): ನಮಗೆ ರಾಜ್ಯ ಬಜೆಟ್ ಬಗ್ಗೆಯೂ ನಿರೀಕ್ಷೆ ಇಲ್ಲ. ಅದು ಬಿಜೆಪಿ ಬಚಾವ್ ಬಜೆಟ್ ಆಗಿರುತ್ತೆ. ಬೊಮ್ಮಯಿ ಬಚಾವ್ ಬಜೆಟ್ ಆಗಿರುತ್ತೆ. ಇದರಿಂದ ನಯಾ ಪೈಸೆ ಜನರಿಗೆ ಉಪಯೋಗಿವಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ  ವ್ಯಂಗ್ಯವಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ,  ಡಬಲ್ ಇಂಜಿನ್ ಸರ್ಕಾರದಿಂದ  ಜನ ಬೇಸತ್ತಿದ್ದಾರೆ. ಬಜೆಟ್ ನಲ್ಲಿ ಕೊಟ್ಟ ಭರವಸೆ ಈಡೇರಿಸಿ. ಕನ್ನಡಿಗರು ಎಚ್ಚೆತ್ತು ಕೊಂಡಿದ್ದಾರೆ ಬಿಜೆಪಿ ಮೋಸದ ಬಗ್ಗೆ ಜನರಿಗೆ ಅರ್ಥವಾಗಿದೆ ಎಂದರು.

ರಮೇಶ್ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್ ನಡುವೆ ಸಿಡಿ ಫೈಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ,  ಪ್ರಕರಣ  ಸಿಬಿಐಗೆ ಕೊಡಲಿ ಎಂದು ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ. ಇಲ್ಲಿ ಕಾನೂನು ಇಲ್ವಾ..? ಅಮಿತ್ ಶಾ ರಿಂದ ಒತ್ತಡ ಹಾಕಿಸುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.

Key words: no expectation- state budget-Priyank Kharge