ಬೆಂಗಳೂರಿನಲ್ಲಿ ದೇಶದ ಮೊದಲ ಕ್ರೀಡಾ ವಿಜ್ಞಾನ ಕೇಂದ್ರಕ್ಕೆ ಚಾಲನೆ

ಬೆಂಗಳೂರು, ಫೆಬ್ರವರಿ 01, 2019 (www.justkannada.in): ಪೀಪಲ್ ಟ್ರೀ ನಿರ್ವಹಣೆಯ ದೇಶದ ಮೊಟ್ಟ ಮೊದಲ ಕ್ರೀಡಾ ವಿಜ್ಞಾನ ಕೇಂದ್ರಕ್ಕೆ ಉಪ ಮುಖ್ಯಮಂತ್ರಿ ಡಾ. ಸಿ ಅಶ್ವತ್ಥ್‌ ನಾರಾಯಣ ಚಾಲನೆ ನೀಡಿದ್ದಾರೆ.

ಕ್ರೀಡೆಗಳಲ್ಲಿ ಗಾಯಕ್ಕೆ ತುತ್ತಾಗುವ ಕ್ರೀಡಾಪಟುಗಳಿಗೆ ತುರ್ತು ಚಿಕಿತ್ಸೆ ನೀಡುವ ಉದ್ದೇಶದಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪೀಪಲ್ ಟ್ರಿ ಆಸ್ಪತ್ರೆ ಸಹಯೋಗದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ರೂಪಿಸಲಾಗಿದೆ. ದೇಶದ ಮೊದಲ ಕ್ರೀಡಾ ವಿಜ್ಞಾನ ಕೇಂದ್ರ ಇದಾಗಿದೆ.