ಬಿಜೆಪಿ ಮಹಿಳಾ ವಿಂಗ್ ಎಲ್ಲಿದೆ‌ ಅಂತ ಗೊತ್ತಿಲ್ಲ: ಯುವತಿಗೆ ಅನ್ಯಾಯವಾದ್ರೂ ದನಿ ಎತ್ತುತ್ತಿಲ್ಲ- ಮಂಜುಳಾ ಮಾನಸ ಆಕ್ರೋಶ…

ಮೈಸೂರು,ಏಪ್ರಿಲ್,1,2021(www.justkannada.in): ಸಿಡಿ ಪ್ರಜಕರಣದಲ್ಲಿ

ನಿರ್ಭಯಾ ಪ್ರಕರಣದ ಬಳಿಕ ಗೈಡ್‌ ಲೈನ್ಸ್ ಗಾಳಿಗೆ ತೂರಲಾಗಿದೆ. ಇಡೀ ರಾಜ್ಯವೇ ತಲೆ ತಗ್ಗಿಸುವಂತಹ ಕೃತ್ಯ ಇದಾಗಿದೆ‌. ಬಿಜೆಪಿ‌ ದುರಾಡಳಿತದ ಬಗ್ಗೆ ಜನ‌ ಅಸಹ್ಯ ಪಡುತ್ತಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿರುವುದು ಬಿಜೆಪಿಗೆ ನಾಚಿಕೆಯಾಗುವ ಸಂಗತಿ. ಅಗ್ರೆಸ್ಸಿವಾಗಿ ಮಾತನಾಡುವ ಪ್ರತಾಪ್‌ಸಿಂಹ, ಸಿ.ಟಿ.ರವಿ , ಶೋಭಾ ಕರಂದ್ಲಾಜೆ ಎಲ್ಲಿ ಹೋದ್ರು. ಶ್ರೀರಾಮ ಜಪ‌ ಮಾಡುವ ದೇಶ ಭಕ್ತರು ಎಲ್ಲಿ ಹೋದ್ರು ಎಂದು ಮಂಜಳಾ ಮಾನಸ ಟೀಕಿಸಿದರು.

ಕರ್ನಾಟಕದಲ್ಲಿ ಆಡಳಿತ ಸತ್ತುಹೋಗಿದೆ.. ಬಿಎಸ್‌ವೈ‌ಗೆ ಕಣ್ಣು ಕಿವಿ ಕೇಳಿಸಲ್ವ, ಗೃಹ ಇಲಾಖೆ ಸತ್ತು ಹೋಗಿದೆ. ಯಾವ ಮುಖ ಇಟ್ಕೊಂಡು ಜಾರಕಿಹೊಳಿಯನ್ನ ಪ್ರಚಾರಕ್ಕೆ ಕೊಂಡೋಯ್ಯುತ್ತೀರಿ‌ ಎಂದು ಮಂಜುಳಾ ಮಾನಸ ವಾಗ್ದಾಳಿ ನಡೆಸಿದರು.

Key words: BJP -women’s -wing –CD case-kpcc-  Manjula Mansa- Outrage-mysore