ಕಿಡ್ನಿ ವೈಪಲ್ಯದಿಂದ ಬಳಲುತ್ತಿರುವ ವ್ಯಕ್ತಿಗೆ  ಸ್ಪಂದಿಸಿ ಚಿಕಿತ್ಸೆಗೆ ಸಹಾಯದ ಧನ ಕೊಡಿಸುವ ಆಶ್ವಾಸನೆ ನೀಡಿದ ಸಂಸದ ಪ್ರತಾಪ್ ಸಿಂಹ.

kannada t-shirts

 

ಮೈಸೂರು,ಅಕ್ಟೋಬರ್,4,2021(www.justjkabnanadai.in) ಕಿಡ್ನಿ ವೈಪಲ್ಯದಿಂದ ಬಳಲುತ್ತಿರುವ ವ್ಯಕ್ತಿಗೆ  ಸ್ಪಂದಿಸಿ ಚಿಕಿತ್ಸೆಗೆ ಸಂಸದ ಪ್ರತಾಪ್ ಸಿಂಹ ಸಹಾಯದ ಧನ ಕೊಡಿಸುವ ಆಶ್ವಾಸನೆ ನೀಡಿದ್ದಾರೆ.

ಮಾಸ್ಟರ್ ಸಂಜಯ್ ಬಿನ್ ರಾಜ್ ಕುಮಾರ್, ವಯಸ್ಸು:20, ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾಗಿರುತ್ತಾರೆ. ಪ್ರಸ್ತುತ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು, ತಮಿಳು ನಾಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಸದರಿ ಕುಟುಂಬದವರು ಆರ್ಥಿಕವಾಗಿ ತೊಂದರೆಯಲ್ಲಿದ್ದು, ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸಲು ಸಾಧ್ಯವಾಗದ ಕಾರಣ, ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ  ಪ್ರತಾಪ್ ಸಿಂಹ ಅವರಲ್ಲಿ ಮೊರೆಹೊದರು.

ಇದಕ್ಕೆ ಕೂಡಲೆ ಸ್ಪಂದಿಸಿದ ಸಂಸದರು ಮೈಸೂರು ನಗರದ ಜೈನ್ ಸಮುದಾಯದ ದಾನಿಗಳಾದ ನವರತನ್ ಜೈನ್ ಅವರಿಂದ ರೂ.50,000/-ಗಳ ಸಹಾಯ ಧನವನ್ನು ಕೊಡಿಸಿದ್ದಾರೆ.  ಹಾಗೂ ಮುಂದಿನ ಚಿಕಿತ್ಸೆಗೆ ತಗಲುವ ಅಂದಾಜು ಮೊತ್ತ ರೂ.3,00,000/-ಗಳನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಪರಿಹಾರ ನಿಧಿಯಡಿ ಭರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಹಾಗೂ ಶಸ್ತ್ರ ಚಿಕಿತ್ಸೆಯು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

Key words: Pratap simha- MP- promised – help – person- suffering – kidney failure,

website developers in mysore