ಕಾಡಾನೆಯ ರೌದ್ರಾವತಾರ‌: ಸಿಟ್ಟಿಗೆದ್ದು ಗ್ರಾಮಸ್ಥರತ್ತ ನುಗ್ಗಿ ಜನರನ್ನ ಅಟ್ಟಾಡಿಸಿದ ಒಂಟಿ ಸಲಗ.

kannada t-shirts

ಮೈಸೂರು,ಡಿಸೆಂಬರ್,6,2021(www.justkannada.in):  ಹಾಡಹಗಲೇ ಗ್ರಾಮಕ್ಕೆ ನುಗ್ಗಿದ  ಕಾಡಾನೆ ಜನರನ್ನು ಅಟ್ಟಾಡಿಸಿ, ದಾಂಧಲೆ ನಡೆಸಿದ ಘಟನೆ‌ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಾಡಂಚಿನಲ್ಲಿ ನಡೆದಿದೆ.

ಹುಣಸೂರು ತಾಲ್ಲೂಕಿನ ಗುರುಪುರ ಟಿಬೆಟ್ ಕ್ಯಾಂಪ್‌ ಬಳಿ ಈ ಘಟನೆ ನಡೆದಿದ್ದು, ಜನ ಆನೆ ಅಟ್ಟಾಡಿಸಿದರೇ. ಒಂಟಿ ಸಲಗ ಜನರನ್ನೂ ಅಟ್ಟಾಡಿಸಿದೆ.  ಸುಮಾರು ಎರಡು ಗಂಟೆ ವಾಹನ ಸವಾರರಿಗೆ ಒಂಟಿಸಲಗ ಉಪಟಳ ನೀಡಿದ್ದು, ವ್ಯಕ್ತಿಯೊಬ್ಬ ಆನೆಯತ್ತ ಬೆಂಕಿ ಎಸೆದಿದ್ದಾನೆ.

ಸಿಟ್ಟಿಗೆದ್ದು ಗ್ರಾಮಸ್ಥರತ್ತ ನುಗ್ಗಿದ ಆನೆ, ಜನರನ್ನ ಓಡಾಡಿಸಿ ವಿದ್ಯುತ್ ಪ್ರವಹಿಸುತ್ತಿದ್ದ ಕಂಬ ಕಿತ್ತೆಸೆದು ಭಯಭೀತಿಗೊಳಿಸಿದೆ. ಈ ವೇಳೆ ಆನೆ ಅಪಾಯದಿಂದ ಪಾರಾಗಿದೆ. ಗ್ರಾಮಕ್ಕೆ ನುಗ್ಗಿ ದಾಂಧಲೆ ನಡೆಸಿದ ಆನೆಯನ್ನ  ಕಾಡಿಟ್ಟಲು ಗ್ರಾಮಸ್ಥರು ಹರಸಾಹಸಪಟ್ಟರು.

Key words: elephant-mysore-nagarahole-national park

 

website developers in mysore