ಒಂಟಿ ಸಲಗ ದಾಳಿ: ಇಬ್ಬರಿಗೆ ಗಾಯ

 

ಚಾಮರಾಜನಗರ,ಅ,22,2019(www.justkannada.in): ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಇಂದು ಒಂಟಿ ಸಲಗ ಆನೆಯೊಂದು ದಿಢೀರನೆ ಊರ ಬದಿಯ ಹೊಲಕ್ಕೆ ಪ್ರವೇಶಿಸಿ ದಾಳಿ ಮಾಡಿದ್ದ ಪರಿಣಾಮವಾಗಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ ನಂತರ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಬಂದೂಕಿನಿಂದ ಗುಂಡು ಹಾರಿಸಿ ನಂತರ ಆನೆಯನ್ನು ಕಾಡಿನತ್ತ ಹೊಡಿಸಿದ್ದಾರೆ.