`ವೀರು’ ಕ್ಯಾನ್ಸರ್ ಗೆದ್ದು ಬಾ : ಅಭಿಮಾನಿಗಳ ಹಾರೈಕೆ
ಮೈಸೂರು : ಭಾರತದ ಕ್ರಿಕೆಟ್ ಪಟು ಯುವರಾಜ್ ಸಿಂಗ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಪ್ರತಿಭಾವಂತ ಆಟಗಾರ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಹರಕೆ ಹೊತ್ತಿದ್ದಾರೆ. ಈ ಸಲುವಾಗಿಯೇ ಇಂದು ಮೈಸೂರು ನಗರದಲ್ಲಿ ಯುವಿ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ನಡೆಸಿದರು.
ಮೈಸೂರು ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಇಂದು ಯುವರಾಜ್ ಆರೋಗ್ಯ ಚೇತರಿಕೆಗಾಗಿ ದೇವರಮೊರೆ ಹೋಗಲಾಯಿತು.ಭಾರತೀಯ ಕ್ರಿಕೆಟ್ ತಂಡದ ಅಪ್ರತಿಮ ಆಟಗಾರ ಯುವಿ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಚಿಕಿತ್ಸೆ ಯಶಸ್ವಿಯಾಗಲಿ, ಯುವಿ ಮೊದಲಿಂತೆ ಭಾರತತಂಡದ ಪರ ಆಟವಾಡಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ. ಈ ಸಲುವಾಗಿಯೇ ಇಂದು ಮೈಸೂರಿನಲ್ಲಿ 101 ತೆಂಗಿನಕಾಯಿ ಹೊಡೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
———————————-




1 Comment
“Veeru” Cancer geddu baa?? Cancer irodu Yuvi avrige taane?