ರಂಗನಾಥ್ ಒಡೆತನದ `ಟಿವಿ’ ಚಾನಲ್ ಹೆಸ್ರು `ಪಬ್ಲಿಕ್ ‘ ಆಗಿದೆ..!

 

ಅಂಥೂ ಇಂಥೂ ಹೊಸ ಕನ್ನಡ  ಚಾನೆಲ್ ಉದ್ಘಾಟನೆಗೆ ದಿನಾಂಕ ಪಕ್ಕಾ ಆಗಿದೆ. ಇದೇ ಜನವರಿ 26 ರಂದು ಭಾರತ ಗಣರಾಜ್ಯೋತ್ಸವ . ಅದೇ  ದಿನ ಕನ್ನಡ ಟಿವಿ ಚಾನಲ್ಲುಗಳ ಸಾಲಿಗೆ  ಹೊಸ ವಾಹಿನಿಯಾಗಿ  ”ಪಬ್ಲಿಕ್ ಟಿವಿ” ಸೇರ್ಪಡೆಗೊಳ್ಳುತ್ತಿದೆ.  ಪತ್ರಕರ್ತ ಎಚ್. ಆರ್. ರಂಗನಾಥ್.  ಕನ್ನಡ ಪ್ರಭದ ಮೂಲಕ ಪತ್ರಿಕೋದ್ಯಮದಲ್ಲಿ ಗುರುತಿಸುವಂತಾದ ಪತ್ರಕರ್ತ ಎಚ್ . ಆರ್. ರಂಗನಾಥ್ ಇನ್ನು ಮುಂದೆ ಪತ್ರಿಕೋದ್ಯಮಿ.

ಸುವರ್ಣ ವಾಹಿನಿಯಿಂದ ಹೊರ ಬಿದ್ದ ಬಳಿಕ ರಂಗನಾಥ್ ಹೊಸವಾಹಿನಿ ಪ್ರಾರಂಭಿಸುವ ಬಗ್ಗೆ ಗುಸುಗುಸು ಕೇಳಿ ಬಂದಿತ್ತು. ಕೆಲ ತಿಂಗಳುಗಳ ಬಳಿಕ ಅದು ವದಂತಿಯಾಗಿ, ಈಗ ಅಧಿಕೃತವಾಗಿದೆ.

 ಈ 24/7 ಸುದ್ದಿ ವಾಹಿನಿಯ ಮುಖ್ಯಸ್ಥರು. Writemen Media Pvt Ltd ಸಂಸ್ಥೆ `ಪಬ್ಲಿಕ್ ಟಿವಿ’ ಯನ್ನು ಸಾದರಪಡಿಸುತ್ತಿದೆ. ಕಂಪನಿಯ ಸಿಇಒ ಅರುಣ್ ಕುಮಾರ್. ಎಸ್. ದಿವಾಕರ್ ಅವರು ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷರು.
” ಇದು ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ” ಎಂಬುದು ಈ ವಾಹಿನಿಯ ಟ್ಯಾಗ್ ಲೈನ್. ಅಂದ್ರೆ  ಜನತೆಯಿಂದ ಜನತೆಗಾಗಿ ಜನತೆಗೋಸ್ಕರ ಎಂಬುದು  ರಂಗನಾಥ್  ಉವಾಚ.

  • ಮನಿ ಮ್ಯಾನೇಜ್ ಮೆಂಟ್ ಮೂಲಕ ಹೂಡಿಕೆ :

ಸಾಮಾನ್ಯವಾಗಿ ಒಂದು ಸುದ್ದಿ ವಾಹಿನಿ ಪ್ರಾರಂಭಿಸಬೇಕಾದರೆ 40-45 ಕೋಟಿ ರೂ ಅಗತ್ಯ ಎಂಬ ನಂಬಿಕೆ ಇದೆ. ಇನ್ನು ಕೆಲವರು 100-150 ಕೋಟಿ ರೂ ಬಂಡವಾಳ ಅಗತ್ಯ ಎನ್ನುತ್ತಾ ಉದ್ಯಮವನ್ನು  ಉತ್ಪ್ರೇಕ್ಷೆ ಮಾಡುತ್ತಾರೆ. ಆದರೆ ಪಬ್ಲಿಕ್ ಟಿವಿಮಾತ್ರ `ಲೋ ಬಜೆಟ್ ‘ ಚಾನೆಲ್ ಅಂಥೆ. ಅರ್ಥಾತ್ 25- 30 ಕೋಟಿ ಬಂಡವಾಳ ಹೂಡಿಕೆ ಮೂಲಕ ಪ್ರಾರಂಭಿಸಲಾಗಿದೆ.

  • ಪಬ್ಲಿಕ್ ಟಿವಿ ಬಂಡವಾಳಗಾರರು ಯಾರು ಎಂಬುದನ್ನು ಈ ತನಕ ಎಲ್ಲಿಯೂ ಬಹಿರಂಗ ಪಡಿಸದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಕೆಲ ಸಿನಿಮಾ ಮಂದಿಯವರು ಈ ವಾಹಿನಿಯ ಚಾಲನೆಗೆ ಆರ್ಥಿಕ ಶಕ್ತಿ ಒದಗಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಯಾವುದು ಅಧಿಕೃತವಲ್ಲ.      
  • ಹಾಲಿ ಕನ್ನಡದ ಚಾನೆಲ್ಲ್ ಗಳು ಯಾರ ಒಡೆತನದಲ್ಲಿವೆ ಎಂಬುದು ಜಗ್ಗಜಾಹಿರುಗೊಂಡಿದೆ.   ಉದ್ಯಮಿಗಳ ಹಿಡಿತಕ್ಕಿಂತ ರಾಜಕಾರಣಿಗಳ ಹಿಡಿತವೇ ತುಸು ಹೆಚ್ಚಾಗಿದೆ.
    ಉದಯ ಟಿವಿ ಮಾಲೀಕ ದಯಾನಿಧಿ ಮಾರನ್ , ಪಕ್ಷ :  ಡಿಎಂಕೆ , ಈ ಟಿವಿ ಮೂಲ  ಮಾಲೀಕರು ರಾಮೋಜಿರಾವ್ – ಭಾವಿ ಮಾಲೀಕರು ಅಂಬಾನೀಸ್, ಇದೇ ರೀತಿ  ಜನಶ್ರೀ ಟಿವಿ ಮಾಲೀಕ ಮಾಜಿ ಸಚಿವ ಜನಾರ್ದನ ರೆಡ್ಡಿ , ಪಕ್ಷ ಬಿಜೆಪಿ . ಕಸ್ತೂರಿ ಟಿವಿ ಒಡತಿ ಶ್ರೀಮತಿ ಅನಿತಾ ಎಚ್ ಡಿ ಕುಮಾರಸ್ವಾಮಿ, ಪಕ್ಷ  ಜೆಡಿಎಸ್ . ಸಮಯ ಟಿವಿ  ಮಾಲೀಕರು ಸಚಿವ ಮುರುಗೇಶ್ ನಿರಾಣಿ, ಪಕ್ಷ ಬಿಜೆಪಿ . ಟಿವಿ9 ಮಾಲೀಕ ಉದ್ಯಮಿ ಶ್ರೀನಿರಾಜು, ಕಡೆಯದಾಗಿ ಸುವರ್ಣ ಟಿವಿ ಮಾಲೀಕರು , ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ .

 

Related Posts

  • No Related Posts

About the author

 
 

1 Comment

  1. prasam2005 says:

    best of luck

 
 

Leave a Comment